ಮಿತ್ತಬೈಲ್ ರೇಂಜ್ ಸಾಹಿತ್ಯ ಕಲಾ ಮೇಳ 2019
ವಿಟ್ಲ, ಜ. 22 : ಸಮಸ್ತ ಕೇರಳ ಜುಂ ಇಯ್ಯತುಲ್ ಮುಅಲ್ಲಿಮೀನ್ ಮಿತ್ತಬೈಲ್ ರೇಂಜ್ ಇದರ 15 ನೇ ಸಾಹಿತ್ಯ ಕಲಾ ಮೇಳ 2019 ಗೂಡಿನ ಬಳಿ ಯಲ್ಲಿ ಸಮಾಪ್ತಿ ಗೊಂಡಿತು. 5 ವಿಭಾಗಗಳಲ್ಲಿ ನಡೆದ 21 ಮದ್ರಸಗಳ ಕಾರ್ಯಕ್ರಮಗಳು ಅಮೆಮಾರ್ ಹಾಗೂ ಗೂಡಿನ ಬಳಿ ಮದ್ರಸಗಳಲ್ಲಿ ಜಮಾಅತ್ ಕಮಿಟಿಯವರ ಸಹಕಾರದೊಂದಿಗೆ ನಡೆಯಿತು.
ಖಿದ್ಮತುಲ್ ಇಸ್ಲಾಂ ಮದ್ರಸ ಪರ್ಲಿಯ ಪ್ರಥಮ ಹಯಾತುಲ್ ಇಸ್ಲಾಂ ಮದ್ರಸ ಗೂಡಿನಬಳಿ ದ್ವಿತೀಯ ಹಾಗು ತೃತೀಯ ಸ್ಥಾನವನ್ನು ಹಯಾತುಲ್ ಇಸ್ಲಾಂ ಮದರಸ ಪಲ್ಲಮಜಲ್ ಪಡೆದುಕೊಂಡಿದೆ.
ಸ್ವಾಗತ ಸಮಿತಿ ಚೆಯರ್ ಮ್ಯಾನ್ ಮುಹ್ಸಿನ್ ಫೈಝಿ, ಸ್ಥಳೀಯ ಖತೀಬರುಗಳಾದ ರಿಯಾಝ್ ರಹ್ಮಾನಿ, ಅಬೂ ಸ್ವಾಲಿಹ್ ಫೈಝಿ, ರೇಂಜ್ ಅಧ್ಯಕ್ಷರು ಇಬ್ರಾಹಿಂ ದಾರಿಮಿ, ಕಾರ್ಯದರ್ಶಿ ಮುಸ್ತಫ ಫೈಝಿ, ಮ್ಯಾನೇಜ್ಮೆಂಟ್ ಅಧ್ಯಕ್ಷರು ಯೂಸುಫ್ ಬದ್ರಿಯಾ, ಕಾರ್ಯದರ್ಶಿ ಅಬ್ದುಲ್ ಸಲಾಂ ಮಿತ್ತಬೈಲ್, ಪರೀಕ್ಷಾ ಬೋರ್ಡ್ ಚೆಯರ್ ಮ್ಯಾನ್ ಯೂಸುಫ್ ಮುಸ್ಲಿಯಾರ್, ಸ್ಥಳೀಯ ಅಧ್ಯಕ್ಷರು ಮುಹಮ್ಮದ್ ಹಾಜಿ ಹಾಗೂ ಉಮರಬ್ಬ ಹಾಜಿ, ಕಾರ್ಯದರ್ಶಿ ಉಬೈದುಲ್ಲಾ, ಅಬೂ ಸ್ವಾಲಿಹ್ ಮುಸ್ಲಿಯಾರ್, ಜೊತೆ ಕನ್ವೀನರ್ ರಹೀಂ ಅಝ್ಹರಿ, ಇಸ್ಮಾಯಿಲ್ ಮುಸ್ಲಿಯಾರ್, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಶಬೀರ್ ಮುಸ್ಲಿಯಾರ್, ಸ್ಥಳೀಯ ಸದರ್ ಉಸ್ತಾದ್ ಶುಹೈಬ್ ಇರ್ಫಾನಿ,ಮುಹ್ಯುದ್ದೀನ್ ಹಸನಿ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮಕ್ಬೂಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ವೀನರ್ ಉಸ್ಮಾನ್ ರಾಝಿ ಬಾಖವಿ ಸ್ವಾಗತಿಸಿ, ವಂದಿಸಿದರು.