ತಲಪಾಡಿ: ಜ. 23ರಂದು ಶೈಖುನಾ ಜಬ್ಬಾರ್ ಉಸ್ತಾದ್ ರವರ ಆನುಸ್ಮರಣಾ ಕಾರ್ಯಕ್ರಮ
ಮಂಗಳೂರು, ಜ. 22: ಸಮಸ್ತ ಕೇರಳ ಜಂಇಯ್ಶತುಲ್ ಉಲಮಾ ದಕ್ಷಿಣ ಕರ್ನಾಟಕ ಇದರ ಅಧೀನದಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಜ.23ರಂದು ಮರ್ಹೂಮ್ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಅವರ ಅನುಸ್ಮರಣಾ ಕಾರ್ಯಕ್ರಮ ಅಲ್ ಖಝಾನ್ ಹಾಲ್ ತಲಪಾಡಿ ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಖಬರ್ ಝಿಯಾರತ್ ನಡೆಯಲಿದ್ದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಕಿನ್ಯ ನೇತೃತ್ವ ನಿಡಲ್ಲಿದ್ದಾರೆ. ನಂತರ 10:30ಕ್ಕೆ ಅನುಸ್ಮರಣಾ ಕಾರ್ಯಕ್ರಮದಲ್ಲಿ ಸೈಯದ್ ಝೈನುಲ್ ಅಬೀದಿನ್ ಜೀಫ್ರಿ ತಂಙಳ್ ದುವಾಗೈಯಲ್ಲಿದ್ದು ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಅಬೀದಿನ್ ತಂಙಳ್ ವಹಿಸಲಿದ್ದು ಉಧ್ಘಾಟನೆಯನ್ನು ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮದ್ ಮುಸ್ಲೀಯಾರ್ ಮಾಡಲ್ಲಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಸ್ವಾಗತ ಮಾಡುವರು. ಮುಖ್ಯ ಭಾಷಣಕಾರರಾಗಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಆಗಮಿಸಲಿ ದ್ದಾರೆ. ಉಸ್ಮಾನ್ ಪೈಝಿ ತೋಡಾರ್, ಅಶ್ರಫ್ ಪೈಝಿ ಕೊಡಗು, ಇರ್ಷಾದ್ ದಾರಿಮಿ ಮಿತ್ತಬೈಲ್. ಇಬ್ರಾಹಿಮ್ ಬಾಖವಿ ಕೆ.ಸಿ.ರೋಡ್ ಮುಂತಾದವರು ಮಾತನಾಡಲ್ಲಿರೆಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ತಿಳಿಸಿದ್ದಾರೆ