ಜಾರ್ಜ್ ಫೆರ್ನಾಂಡಿಸ್ ನಿಧನ: ಪೇಜಾವರಶ್ರೀ ಸಂತಾಪ
ಉಡುಪಿ, ಜ.30: ಕೇಂದ್ರದ ಮಾಜಿ ರಕ್ಷಣಾ ಸಚಿವರಾದ ಜಾರ್ಜ್ ಫೆರ್ನಾಂಡಿಸ್ ನಿಧನದಿಂದ ನಮಗೆ ಖೇಧವಾಗಿದೆ. ಅವರು ನಾಡಿಗೆ ಉತ್ತಮ ಸೇವೆಯನ್ನು ಸಲ್ಲಿಸಿದವರು. ತುರ್ತು ಪರಿಸ್ಥಿತಿಯ ಹೋರಾಟಗಾರರಾಗಿ, ಕಾರ್ಗಿಲ್ ಯುದ್ಧದ ವಿಜಯದ ರುವಾರಿಯಾಗಿ ದೇಶಕ್ಕೆ ಮಹತ್ವದ ಸೇವೆಯು ಅವರಿಂದ ಸಂದಿದೆ. ನಮಗೂ ಅತ್ಯಂತ ಪರಿಚಿತರೂ ಅನೇಕ ಸಲ ನಮ್ಮನ್ನು ಭೇಟಿ ಆಗಿದ್ದರು. ರೈಲ್ವೇ ಮಂತ್ರಿಯಾಗಿದ್ದಾಗ ಕರಾವಳಿಗೆ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಸದ್ಗತಿ ದೊರೆಯಲೆಂದು ಶ್ರೀಕೃಷ್ಣನನ್ನು ಪ್ರಾರ್ಥಿಸುತ್ತೇನೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
Next Story