ಯೋಧರ ಹತ್ಯೆ: ಮುಸ್ಲಿಮ್ ಒಕ್ಕೂಟ ಖಂಡನೆ
ಉಡುಪಿ, ಫೆ.15: ಕಾಶ್ಮೀರದ ಫುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ದೇಶದ ಯೋಧರು ಹುತಾತ್ಮರಾಗಿದ್ದು, ಇಂತಹ ಹೇಯ, ಅಮಾ ನವೀಯ ಕೃತ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ತೀವ್ರವಾಗಿ ಖಂಡಿಸಿದೆ.
ಇಂತಹ ಕೃತ್ಯಗಳನ್ನು ರಾಜಕೀಯಗೊಳಿಸದೆ, ಧರ್ಮದೊಂದಿಗೆ ಜೋಡಿಸದೆ ದೇಶದ ಸಾರ್ವಭೌಮತ್ವದ ಮೇಲೆ ನಡೆದ ದುರಾಕ್ರಮಣವೆಂದು ತಿಳಿದು ಒಗ್ಗಟ್ಟಾಗಿ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುವುದು ತುರ್ತು ಅಗತ್ಯವಿದೆ ಎಂದು ಒಕ್ಕೂಟದ ಪತ್ರಿಕಾ ಕಾರ್ಯದರ್ಶಿ ಸಲಾಹುದ್ದೀನ್ ಅಬ್ದುಲ್ಲಾಹ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story