ಹಾಫಿಳ್ ಸುಲ್ತಾನ್ ನಬೀಲ್ ಖಾದರ್ಗೆ ಸನ್ಮಾನ
ಮಂಗಳೂರು, ಫೆ.16: ಕುರ್ಆನ್ ಕಂಠಪಾಠ ಮಾಡಿದ ಹಾಫಿಳ್ ಸುಲ್ತಾನ್ ನಬೀಲ್ ಖಾದರ್ ಅವರಿಗೆ ಮಂಚಿಲ ಸಫರ್ ಸ್ಫೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮಂಚಿಲ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಮಕ್ಸೂದ್ ಖಾದರ್, ಖತೀಬ್ ಇಸ್ಮಾಯಿಲ್ ಬುಖಾರಿ, ನಗರಸಭೆಯ ಸದಸ್ಯ ಅಯ್ಯೂಬ್ ಯು.ಪಿ., ಸಫರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ನ ಮ್ಯಾನೇಜರ್ ಅಬ್ದುಲ್ ರಹ್ಮಾನ್ ಕರೀಂ, ಅಧ್ಯಕ್ಷ ನಝೀರ್ ಹುಸೈನ್, ಮಾಜಿ ಅಧ್ಯಕ್ಷ ಫತ್ತಾಕ್ ಯು.ಎಚ್., ಜೊತೆ ಕಾರ್ಯದರ್ಶಿ ಇಕ್ಬಾಲ್ ಮಂಚಿಲ, ಮಾಜಿ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಯು.ಕೆ., ಕ್ಯಾಪ್ಟನ್ ಜಸೀಂ ಮುನ್ನ, ಮಾಜಿ ಕೋಶಾಧಿಕಾರಿ ರಫೀಕ್ ಯು.ಪಿ., ಮಾಜಿ ಕಫ್ತಾನ ಮನ್ಸೂರ್ ಯು.ಎಂ., ಸದಸ್ಯರಾದ ನೌಶಾದ್ ಅಲಿಯಬ್ಬ, ಕಮಿಟಿ ಸದಸ್ಯರಾದ ಯು.ಎ. ಇಸ್ಮಾಯೀಲ್, ಅಸ್ಗರ್ ಆಲಿ, ಯುನೈಟೆಡ್ ಮಾರ್ಗತಲೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಆಸೀಫ್ ಮಾರ್ಗತಲೆ ಉಪಸ್ಥಿತರಿದ್ದರು.
Next Story