ಜಮ್ಮು ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಕೆಸಿಸಿಐ ಖಂಡನೆ
ಮಂಗಳೂರು, ಫೆ.17: ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಉಗ್ರನು ನಡೆಸಿದ ಆತ್ಮಾಹುತಿ ಬಾಂಬ್-ಸ್ಫೋಟಕಗಳ ದಾಳಿಯನ್ನು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ(ಕೆಸಿಸಿಐ)ಯು ತೀವ್ರವಾಗಿ ಖಂಡಿಸಿದೆ.
ಈ ದುರ್ಘಟನೆಯಿಂದಾಗಿ ಹುತಾತ್ಮರಾದ ಸಿಆರ್ಪಿಎಫ್ನ ಯೋಧರೆಲ್ಲರಿಗೂ ಗೌರವ ಪೂರ್ವಕವಾದ ಶ್ರದ್ಧಾಂಜಲಿ ಅರ್ಪಿಸಲಾಗುವುದ. ಈ ದುರ್ಘಟನೆಯಿಂದಾಗಿ ತಮ್ಮ ಪುತ್ರರನ್ನು /ಬಂಧುಗಳನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿರುವ ಹುತಾತ್ಮರ ಕುಟುಂಬದವರು, ಬಂಧು-ಬಳಗದವರು ಮತ್ತು ಅವರ ಹಿತೈಷಿಗಳ ದುಃಖವನ್ನು ದೂರ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಪ್ರಕಟನೆ ತಿಳಿಸಿದೆ.
Next Story