ಮಾ.1ರಿಂದ ಯುನಿವೆಫ್ ಸದಸ್ಯತ್ವ ಅಭಿಯಾನ ಉದ್ಘಾಟನೆ
ಮಂಗಳೂರು, ಫೆ.28: ‘ಸಬಲೀಕೃತ ಸದೃಢ ಸಮುದಾಯಕ್ಕಾಗಿ ಹಾಗೂ ಸುಶಿಕ್ಷಿತ ಸುರಕ್ಷಿತ ಸಚ್ಚರಿತ ಸಮಾಜಕ್ಕಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಯುನಿವೆಫ್ ಕರ್ನಾಟಕ ‘ಬದಲಾವಣೆಗಾಗಿ ನಾನು’ ಎಂಬ ಸದಸ್ಯತ್ವ ಅಭಿಯಾನವನ್ನು ಮಾ.1ರಿಂದ ಹಮ್ಮಿಕೊಂಡಿದೆ.
ಇದರ ಉದ್ಘಾಟನಾ ಕಾರ್ಯಕ್ರಮ ಮಾ.1ರಂದು ರಾತ್ರಿ 8:30ಕ್ಕೆ ಫಳ್ನೀರ್ ಲುಲು ಸೆಂಟರ್ನಲ್ಲಿರುವ ದಾರುಲ್ ಇಲ್ಮ್ ಸಭಾಂಗಣದಲ್ಲಿ ಜರುಗಲಿದೆ. ಬದ್ರಿಯಾ ಪ್ರೌಢ ಶಾಲೆಯ ಪ್ರಾಂಶುಪಾಲ ಮುಹಮ್ಮದ್ ಇಕ್ಬಾಲ್ ಮತ್ತು ಉದ್ಯಮಿ ಅಬ್ದುಲ್ ಹಮೀದ್ ಕೊಹಿನೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸುವರು. ಹೆಚ್ಚಿನ ಮಾಹಿತಿಗೆ ಮೊ.ಸಂ.: 9964129116, 9845199931, 9964024816, 9945913824ನ್ನು ಸಂಪರ್ಕಿಸುವಂತೆ ಅಭಿಯಾನ ಸಂಚಾಲಕ ಹುದೈಫ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story