ನಾಟೆಕಲ್-ವಿಜಯನಗರ: ಮಸೀದಿ ವಕ್ಫ್ ಕಾರ್ಯಕ್ರಮ
ಮಂಗಳೂರು, ಮಾ.14: ಸಬೀಲುಲ್ ರಶಾದ್ ಇಸ್ಲಾಮಿಕ್ ಟ್ರಸ್ಟಿನ ಅಧೀನದಲ್ಲಿ ನಾಟೆಕಲ್ ಸಮೀಪದ ವಿಜಯನಗರದಲ್ಲಿ ನಿರ್ಮಿಸಲಾದ ಮಸೀದಿಯ ‘ವಕ್ಫ್’ ಕಾರ್ಯವನ್ನು ಬುಧವಾರ ಸೈಯದ್ ಜಲಾಲ್ ತಂಙಳ್ ಮಳ್ಹರ್ ಪೊಸೋಟು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಮಸೀದಿ ನಿರ್ಮಾಣಕ್ಕಾಗಿ ನೆರವು ನೀಡುವಂತದ್ದು ಪುಣ್ಯಕಾರ್ಯವು ಮಸೀದಿಯಲ್ಲಿ ಧಾರ್ಮಿಕ ಇತಿ ಮಿತಿಯೊಳಗೆ ಸಲ್ಲಿಸಬೇಕಾದ ಆರಾಧನಾ ಕ್ರಮಗಳನ್ನು ಮಹಲ್ಲಿನ ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು ಎಂದರು.
ಸಬೀಲುಲ್ ರಶಾದ್ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಇಸ್ಮಾಯೀಲ್ ಜಾಸ್ಮಿನ್, ಹಾಜಿ ಎನ್ಎಸ್ ಕರೀಂ, ಉರುಮಣೆ ಮುಹಿಯುದ್ದೀನ್ ಜುಮಾ ಮಸ್ಜಿದ್ನ ಅಧ್ಯಕ್ಷ ಅಬ್ಬಾಸ್ ಮದ್ಪಾಡಿ, ಸ್ಥಳೀಯ ಮುಖಂಡರಾದ ಹಾಜಿ ಹಮ್ಮಬ್ಬ, ಹಾಜಿ ಅಬ್ದುಲ್ ರಝಾಕ್, ಹಾಜಿ ಅಬ್ದುಲ್ ಖಾದರ್ ಕಲ್ಪಾದೆ, ಮುಹಮ್ಮದ್ ಶರೀಫ್, ಅಬ್ದುಲ್ ಖಾದರ್ ಅಡ್ಯಾರ್, ಕೆ.ಎಸ್. ಇಸ್ಮಾಯಿಲ್ ಕಿನ್ಯ, ಖಾದರ್ ಇನೊಳಿ, ಮುಹಮ್ಮದ್ ಕಮಾಲ್, ಉಪನ್ಯಾಸಕ ಅಬ್ದುಲ್ ಅಝೀಝ್, ಅಬ್ದುಲ್ ಹಕೀಂ ಡ್ಯಾನಿಶ್, ಅಬ್ಬಾಸ್ ಸಫರ್ ಫೂಟ್ವೇರ್, ಮೂಸಾ ಸಫರ್ ಸ್ವೀಟ್ಸ್ ನಾಟೆಕಲ್ಲು, ಮಹ್ಸೂಕ್, ಫಾರೂಕ್ ನಯೀಮಿ ಮಚ್ಚಂಪಾಡಿ, ಅಬ್ದುಲ್ ಖಾದರ್ ಮುಸ್ಲಿಯಾರ್ ಉರುಮಣೆ, ಸಿದ್ದೀಕ್ ಮದನಿ ನಾಟೆಕಲ್ಲು, ಅಬ್ದುಲ್ ರಹ್ಮಾನ್ ಮಾಸ್ಟರ್ ದೈಗೋಳಿ, ಅಬ್ಬಾಸ್ ಮಲಾರ್ ಮತ್ತಿತರರಯ ಪಾಲ್ಗೊಂಡಿದ್ದರು.
ಕೆ.ವಿ. ಅಬ್ದುಲ್ ರಹ್ಮಾನ್ ಫೈಝಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಟಿ. ಇಸ್ಮಾಯಿಲ್ ವಂದಿಸಿದರು. ಇಮಾಮ್ ನಝೀರ್ ಸಖಾಫಿ ಕೊಯ್ಯೂರ್ ಕಾರ್ಯಕ್ರಮ ನಿರೂಪಿಸಿದರು.