ಪಡುಬಿದ್ರೆ : ಮೆಸ್ಕಾಂ ಕಚೇರಿಯಿಂದ 4.5 ಲಕ್ಷ ರೂ. ಕಳವು
ಪಡುಬಿದ್ರೆ : ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿದ್ದ ಎಟಿಪಿ ಯಂತ್ರದಿಂದ 4.5 ಲಕ್ಷ ರೂ. ಕಳವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪಡುಬಿದ್ರೆಯ ಶ್ರೀ ಮಹಾದೇವಿ ಕಟ್ಟಡದಲ್ಲಿರುವ ಮೆಸ್ಕಾಂ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಎಟಿಪಿ ಯಂತ್ರದ ಹಿಂಬದಿಯನ್ನು ಒಡೆದು ಸುಮಾರು 4.5 ಲಕ್ಷ ರೂ. ಕಳ್ಳತನ ನಡೆಸಿದ್ದು, ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ವಾರದ ಸಂತೆ ಮಂಗಳವಾರ ಇರುವುದರಿಂದ ಈ ಕಚೇರಿಯಲ್ಲಿ ಅಧಿಕ ಬಿಲ್ ಮೊತ್ತ ಸಂಗ್ರವಾಗುತ್ತದೆ. ಸ್ಥಳಕ್ಕೆ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.
Next Story