ಮೇ 21: ಕಚ್ಚೀ ಮಸೀದಿಯಲ್ಲಿ ಯುನಿವೆಫ್ ನಿಂದ ರಮಝಾನ್ ಪ್ರವಚನ
ಮಂಗಳೂರು: ಪವಿತ್ರ ರಮಝಾನ್ ಪ್ರಯುಕ್ತ ಯುನಿವೆಫ್ ಕರ್ನಾಟಕ ಇದರ ದ.ಕ.ಜಿಲ್ಲಾ ಘಟಕದ ವತಿಯಿಂದ ಬಂದರ್ ನಲ್ಲಿರುವ ಕಚ್ಚೀ ಮಸೀದಿಯಲ್ಲಿ ಮೇ 21 ಮತ್ತು ಮೇ 23ರಂದು ಝುಹರ್ ನಮಾಝ್ ನಂತರ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರ ರಮಝಾನ್ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೇ 21ರಂದು 'ಭಯೋತ್ಪಾದನೆ-ಧರ್ಮದ್ರೋಹ' ಎಂಬ ವಿಷಯದಲ್ಲೂ, ಮೇ 23ರಂದು "ಮಹಾವಿಜಯ ಸನ್ನಿಹಿತ' ಎಂಬ ವಿಷಯದಲ್ಲೂ ಪ್ರವಚನ ನಡೆಯಲಿದೆ ಎಂದು ಜಿಲಾಧ್ಯಕ್ಷ ಅಬ್ದುಲ್ಲಾ ಪಾರೆ ತಿಳಿಸಿದ್ದಾರೆ.
Next Story