ಕೆಸಿಎಫ್ ಯಾಂಬು ಸೆಕ್ಟರ್ನಲ್ಲಿ ಇಫ್ತಾರ್ ಕೂಟ
ಮಂಗಳೂರು, ಮೇ 21: ಕರ್ನಾಟಕ ಕಲ್ಟರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ಯಾಂಬು ಸೆಕ್ಟರ್ ವತಿಯಿಂದ ಇಫ್ತಾರ್ ಸಂಗಮ ಕಾರ್ಯಕ್ರಮವು ನಡೆಯಿತು.
ಯಾಂಬು ಶರಂ ಅಫ್ರ ಅಲ್ಹಾನ್ ಇಸ್ತಿರಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಕ್ಬಾಲ್ ಸಅದಿ ಕಾಟಿಪಳ್ಳ ರಮಝಾನ್ ಸಂದೇಶ ನೀಡಿದರು.
ಅಲ್ ಮದೀನಾ ಮಹಿಳಾ ಶರೀಅತ್ ಕಾಲೇಜ್ನ ಪ್ರಾಂಶುಪಾಲ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮತ್ತು ಅಲ್ಮದೀನಾ ನಿರ್ದೇಶಕ ಮುಹಮ್ಮದ್ ಕುಂಞಿ ಅಮ್ಜದಿ ದಿಕ್ಸೂಚಿ ಭಾಷಣಗೈದರು. ಕೆಸಿಎಫ್ ಯಾಂಬು ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಕೃಷ್ಣಾಪುರ ಅಧ್ಯಕ್ಷತೆ ವಸಿದ್ದರು. ಅತಿಥಿಗಳಾಗಿ ಮುಹಮ್ಮದ್ ಪಾಲೇಮಾರ್ ಕೋಟೆ, ನಝೀರ್ ಬಿನ್ಫಾದ್, ಹುಸೇನಬ್ಬ ಬಿನ್ಫಾದ್, ಶರೀಫ್ ಬ್ಲಾಕ್ಸ್ಟೋನ್, ಮುಸ್ತಫಾ ಐಸಿಎಫ್ ಮತ್ತಿತರರು ಭಾಗವಹಿಸಿದ್ದರು.
ಅಬ್ದುಲ್ ಸಲಾಂ ಕೋಡಿ ಕಿರಾಅತ್ ವಾಚಿಸಿದರು. ಅಬ್ದುಲ್ ನಾಸೀರ್ ಮರ್ಝೂಕಿ ಸ್ವಾಗತಿಸಿದರು. ಇರ್ಷಾದ್ ಜೋಗಿಬೆಟ್ಟು ವಂದಿಸಿದರು.
Next Story