ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಇಬ್ಬರ ಸೆರೆ
ಕಾಪು, ಮೇ 21: ಮಂಗಳೂರಿನಿಂದ ಉಡುಪಿ ಕಡೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ನ್ನು ಕಾಪು ಪೊಲೀಸರು ಕಟಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇ 20ರಂದು ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ.
ಟಿಪ್ಪರ್ ಚಾಲಕ ಮುಲ್ಕಿ ಕಾರ್ನಾಡಿನ ಚೆನ್ನಪ್ಪ (42) ಹಾಗೂ ಲಾರಿಗೆ ಬೆಂಗಾವಲಾಗಿದ್ದ ಬೈಕ್ ಸವಾರ ಪುತ್ತೂರಿನ ಮೀಯಾರ ನಿವಾಸಿ ಸಂತೋಷ್ (33) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಟಿಪ್ಪರ್ ಸಹಿತ ಅದರಲ್ಲಿದ್ದ 13,000ರೂ. ಮೌಲ್ಯದ 9 ಟನ್ ಮರಳು ಹಾಗೂ ಬೈಕ್ ಮತ್ತು ಮೊಬೈಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story