ಪಡುಬಿದ್ರೆ, ಹೆಜಮಾಡಿಯಲ್ಲಿ ಸುಮಲತಾ ಪರ ಸಂಭ್ರಮ
ಪಡುಬಿದ್ರಿ: ಪಡುಬಿದ್ರಿ ಹಾಗೂ ಹೆಜಮಾಡಿ ಪರಿಸರದಲ್ಲಿ ಸುಮಲತಾ ಅಂಭರೀಷ್ ಅಭಿಮಾನಿಗಳು ಸಂಭ್ರಮ ಆಚರಿಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಜಯಗಳಿಸಿದ್ದಾರೆ. ಆದರೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸುಮಲತಾ ಬ್ಯಾನರ್ ಪ್ರದರ್ಶಿಸಿ ಪಡುಬಿದ್ರಿಯಿಂದ ಹೆಜಮಾಡಿಯವರೆಗೆ ವಾಹನ ಜಾಥಾ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಹಾಗೂ ಸುಮಲತಾ ಪರ ಘೋಷಣೆ ಕೂಗಿ ನಿಖಿಲ್ ಎಲ್ಲಿದಿಯಪ್ಪಾ ? ಎಂಬ ಹಾಸ್ಯವನ್ನು ಘೋಷಣೆ ಹಾಕುತಿದ್ದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಗಳಿಸಿರುವು ಸಂಭ್ರಮವನ್ನು ಕಾಪು ತಾಲ್ಲೂಕಿನಾದ್ಯಂತ ಕಾರ್ಯಕರ್ತರು ಆಚರಿಸಿದರು.
ಮುನ್ನಡೆ ಸಾಧಿಸುತ್ತಿದ್ದಂಯೇ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮಿಸಿದರು. ಕಾಪು ಪೇಟೆಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದರು. ಸಂಜೆಯ ವೇಳೆ ಸಂಜೆಯ ವೇಳೆಗೆ ಸಂಭ್ರಮ ಆಚರಿಸಿದ ಕಾರ್ಯಕರ್ತರು ಶೋಭಾ ಕರಂದ್ಲಾಜೆ ಹಾಗೂ ನರೇಂದ್ರ ಮೋದಿಯವರ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ. ಸಿಹಿ ಹಂಚಿ ಸಂಭ್ರಮಿಸಿದರು.
ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಮುದರಂಗಡಿ, ಎಲ್ಲೂರು, ಫಲಿಮಾರು, ಕುತ್ಯಾರು ಪರಿಸರದಲ್ಲೂ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಬೈಕ್, ಕಾರಿನಲ್ಲಿ ಬಿಜೆಪಿಯ ಪಕ್ಷದ ದೊಡ್ಡ ಗಾತ್ರ ಧ್ವಜ ಹಿಡಿದುಕೊಂಡು ಜಾಥಾ ನಡೆಸಿದರು.