ಬಿಜೆಪಿ ಜಯಭೇರಿ: ಮಾತನಾಡಲು ನಿರಾಕರಿಸಿದ ಪೂಜಾರಿ
ಬಂಟ್ವಾಳ, ಮೇ 23: ದೇಶ, ರಾಜ್ಯ ಮತ್ತು ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಹಿರಿಯ ಕಾಂಗ್ರೆಸಿಗ ಬಿ.ಜನಾರ್ದನ ಪೂಜಾರಿ ನಿರಾಕರಿಸಿದ್ದಾರೆ.
ಈ ಕುರಿತು ಬಂಟ್ವಾಳದ ಮಾಧ್ಯಮ ಪ್ರತಿನಿಧಿಗಳು ಅವರ ಮನೆಗೆ ತೆರಳಿದ್ದ ಸಂದರ್ಭ ಪೂಜಾರಿ ಮನೆಯವರು, ಅವರು ವಿಶ್ರಾಂತಿಯಲ್ಲಿದ್ದು, ಮಾಧ್ಯಮಗಳೊಂದಿಗೆ ಯಾವುದೇ ಮಾತುಕತೆಯನ್ನಾಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಜನಾರ್ದನ ಪೂಜಾರಿ ಅವರು ಚುನಾವಣಾ ಪೂರ್ವದಲ್ಲಿ ಮಿಥುನ್ ರೈ ಪರ ಮತ್ತು ಮೋದಿ ವಿಚಾರವಾಗಿ ಹೇಳಿಕೆಗಳಿಂದ ಸುದ್ದಿಯಲ್ಲಿದ್ದರು.
Next Story