ಅಂದರ್ ಬಾಹರ್: ನಾಲ್ವರ ಬಂಧನ
ಬ್ರಹ್ಮಾವರ, ಜೂ.30: ಪೆಜಮಂಗೂರು ಗ್ರಾಮದ ಗಾಂಧಿನಗರ ಎಂಬಲ್ಲಿ ಜೂ.30ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಪೂಜಾರಿ, ಅನಿಲ್, ಸದಾಶಿವ ಮರಕಾಲ, ಮಹೇಶ ಬಂಧಿತ ಆರೋಪಿಗಳು. ದಾಳಿ ವೇಳೆ ಗಣೇಶ ಮೊಗವೀರ, ಅಜಿತ್ ಮೊಗವೀರ, ಸಂತೋಷ ಮೊಗವೀರ, ರಾಜಣ್ಣ ಮೊಗವೀರ, ಪ್ರಸಾದ್ ಪೂಜಾರಿ, ಮಹೇಶ್, ಯಶವಂತ ಮೊಗವೀರ ಎಂಬವರು ಪರಾರಿಯಾಗಿದ್ದಾರೆ.
ಬಂಧಿತರಿಂದ 6,170ರೂ. ನಗದು, ಮೊಬೈಲ್ ಹಾಗೂ ಬೈಕ್ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story