ಪೊಲೀಸ್ ನೇಮಕಾತಿಗಾಗಿ ಉಚಿತ ಕಾರ್ಯಾಗಾರ
ಉಡುಪಿ, ಜು.3: ಉಡುಪಿ ಜಿಲ್ಲಾ ಪೊಲೀಸ್ ಹಾಗೂ 7ನೇ ಪಡೆ ಕೆಎಸ್ಆರ್ಪಿ ಮಂಗಳೂರು ವತಿಯಿಂದ ಜು.8ರಿಂದ 20ರವರೆಗೆ ಉಡುಪಿ ಚಂದು ಮೈದಾನದಲ್ಲಿರುವ ಪೊಲೀಸ್ ಜಿಲ್ಲಾ ಸಶಸ್ತ್ರ ಮೀಸಲು ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ ಉಚಿತ ಕಾರ್ಯಾಗಾರವೊಂದನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರಕ್ಕೆ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಮಾನ್ಯತೆ ಪಡೆದ ಗುರುತಿನ ಚೀಟಿ ಹಾಗೂ ಪಾಸ್ಪೋರ್ಟ್ ಸೈಜ್ನ ಪೋಟೊದೊಂದಿಗೆ ಜು.7ರಂದು ಬೆಳಗ್ಗೆ 10ಗಂಟೆಗೆ ಉಡುಪಿಯ ಚಂದು ಮೈದಾನದಲ್ಲಿರುವ ಪೊಲೀಸ್ ಜಿಲ್ಲಾ ಸಶಸ್ತ್ರ ಮೀಸಲು ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆರ್ಎಸ್ಐ ಮುರಳಿ ಎಚ್. ಆರ್. (ಮೊಬೈಲ್:8970242209) ಅಥವಾ ಆರ್ಎಸ್ಐ ಅವಿನಾಶ್ ಎಸ್. (9535852255) ಇವರನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
Next Story