ಕಲ್ಲಡ್ಕ ರೇಂಜ್ ಜಂ-ಇಯ್ಯತುಲ್ ಮುಹಲ್ಲಿಮೀನ್ ಅಧ್ಯಕ್ಷರಾಗಿ ಯಹ್ಯಾ ದಾರಿಮಿ ಆಯ್ಕೆ
ವಿಟ್ಲ : ಕಲ್ಲಡ್ಕ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ 2019 - 2020 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಿ. ಎಂ. ಯಹ್ಯಾ ದಾರಿಮಿ ಗೋಳ್ತಮಜಲು ಆಯ್ಕೆಯಾಗಿದ್ದಾರೆ.
ಸೋಮವಾರ ಕಲ್ಲಡ್ಕದ ಮುನೀರುಲ್ ಇಸ್ಲಾಂ ಮದರಸ ಹಾಲ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು, ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಶೇಖ್ ಮುಹಮ್ಮದ್ ಇರ್ಫಾನಿ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಖ್ ಪೈಝಿ ಪಾರ್ಪಕಜೆ, ಮುಹಮ್ಮದ್ ಅಶ್ರಫ್ ಯಮಾನಿ ಬೋಳಂತೂರು. ಪ್ರಧಾನ ಕಾರ್ಯ ದರ್ಶಿಯಾಗಿ ಬಿ.ಟಿ. ಮುಹಮ್ಮದ್ ಇಕ್ಬಾಲ್ ದಾರಿಮಿ ಕಲ್ಲಡ್ಕ, ಜೊತೆ ಕಾರ್ಯದರ್ಶಿಗಳಾಗಿ ಸ್ವದಖತುಲ್ಲ ಮುಸ್ಲಿಯಾರ್ ಗೋಳ್ತಮಜಲು, ಉಸ್ಮಾನ್ ಫೈಝಿ ಗಡಿಯಾರ, ಪರೀಕ್ಷಾ ಬೋರ್ಡ್ ಚಯರ್ಮಾನ್ ಆಗಿ ಅಹ್ಮದ್ ನಿಝಾರ್ ಮುಸ್ಲಿಯಾರ್, ವೈಸ್ ಚಯರ್ಮಾನ್ ಗಳಾಗಿ ಬಿ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಕಲ್ಲಡ್ಕ, ಅಬ್ದುಲ್ ರಹ್ಮಾನ್ ದಾರಿಮಿ ಕೆ.ಸಿ.ರೋಡ್, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಪಾರ್ಪಕಜೆ, ಎಸ್ ಕೆ ಎಸ್ ಬಿ ವಿ ಕನ್ವೀನರ್ ಆಗಿ ಅಬ್ದುಲ್ ಮಜೀದ್ ದಾರಿಮಿ, ಎಸ್ ಕೆ ಎಸ್ ಬಿ ವಿ ಚಯರ್ಮಾನ್ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಗಡಿಯಾರ, ಐ.ಟಿ. ಕೋಡಿನೇಟರ್ ಆಗಿ ಹಂಝ ಮುಸ್ಲಿಯಾರ್ ಕೆ.ಸಿ.ರೋಡ್, ಕುರುನ್ನುಗಳ್ ಡೈರೆಕ್ಟರ್ ಆಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ಮೊದಲಾದವರನ್ನು ಆರಿಸಲಾಯಿತು.
ಯಹ್ಯಾ ದಾರಿಮಿ