ಸಜೀಪ ರೇಂಜ್ ಎಸ್.ಬಿ.ಎಸ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಜು. 20: ಸುನ್ನಿ ಜಂ ಇಯ್ಯತುಲ್ ಮುಹಲ್ಲೀಮೀನ್ (SJM) ಸಜೀಪ ರೇಂಜ್ ಮಿಷಣರಿ ವಿಭಾಗದ ಸುನ್ನಿ ಬಾಲ ಸಂಘ SBS ವಲಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ಕೇಂದ್ರ ಮದ್ರಸ ಕೊಳಕೆಯಲ್ಲಿ ನಡೆಯಿತು.
ಮಿಷಣರಿ ವಿಭಾಗ ಚೆಯರ್ಮ್ಯಾನ್ ಹಂಝ ಸಅದಿಯ ಅಧ್ಯಕ್ಷತೆಯಲ್ಲಿ ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಖಾಫಿ ಉದ್ಘಾಟಿಸಿದರು. ದಾರುಲ್ ಇಝ್ಝ ಕೌಡೇಲು ಮೆನೇಜರ್ ಸಿನಾನ್ ಮದನಿ ತರಗತಿ ಮಂಡಿಸಿದರು. SMA ರೀಜಿನಲ್ ಸೆಕ್ರೆಟರಿ ಬದ್ರುದ್ದೀನ್ ಅಹ್ಸನಿ ಆಸಂಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸೆರ್ಕಳ ಇಬ್ರಾಹಿಂ ಸಖಾಫಿಯ ನಾಯಕತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಚರಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಅಫ್ರೀದ್ ಕೊಳಕೆ, ಉಪಾಧ್ಯಕ್ಷರಾಗಿ ಮುಹಮ್ಮದ್ ಸಬೀದ್ ಜಾರದ ಗುಡ್ಡೆ, ಇರ್ಷಾದ್ ಅಮ್ಮೆಂಬಲ, ಮುಹಮ್ಮದ್ ಶರಫ್ ಸುಬ್ಬಗುಳಿ, ಪ್ರ.ಕಾರ್ಯದರ್ಶಿಯಾಗಿ ತೌಫೀಖ್ ಖಾದರ್ ಬೊಳ್ಳಾಯಿ, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಶಮ್ಮಾಝ್ ಕೌಡೆಲ್, ಸಅದ್ ಚಟ್ಕಕ್ಕಲ್, ಇಬ್ರಾಹಿಂ ಕಾರಾಜೆ, ಕೋಶಾಧಿಕಾರಿಯಾಗಿ ಅಪ್ರತ್ ಗೊಳಿಪಡ್ಪು ಹಾಗೂ ಕಾರ್ಯಕಾರಿ ಸದಸ್ಯರನ್ನಾಗಿ 13 ಮಂದಿಯನ್ನು ಅರಿಸಲಾಯಿತು.
ಕನ್ವಿನರ್ ರಿಯಾಝ್ ಬಾಹಸನಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.