ಮೂಡುಬಿದಿರೆ: ಮಗುವಿನ ಕಣ್ಣಿಗೆ ಶಸ್ತ್ರಚಿಕಿತ್ಸೆ; ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬ
ಮೂಡುಬಿದಿರೆ: ಇಲ್ಲಿಗೆ ಸಮೀಪದ ವೇಣೂರು ಗೋಳಿಯಂಗಡಿ ಹುಣ್ಸೆಪಲ್ಕೆ ಎಂಬಲ್ಲಿನ ಮುಹಮ್ಮದ್ ಸಅದ್ ಎಂಬ 5 ವರ್ಷ ಪ್ರಾಯದ ಮಗುವಿನ ಕಣ್ಣಿಗೆ ಕಬ್ಬಿಣದ ತುಣುಕು ಬಿದ್ದು ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಬಡ ಕುಟುಂಬದ ಈ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ದಾನಿಗಳಿಂದ ನೆರವು ನಿರೀಕ್ಷಿಸಲಾಗಿದೆ.
ಅಶ್ರಫ್ ಕೆ. ಎಂಬವರ ಮಗು ಸಅದ್ನ ಕಣ್ಣಿಗೆ ಇತ್ತೀಚೆಗೆ ಕಬ್ಬಿಣದ ತುಣುಕು ಬಿದ್ದಿದ್ದು, ಕಣ್ಣಿನ ಲೆನ್ಸ್ಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ತುಣುಕನ್ನು ಆಪರೇಷನ್ ಮೂಲಕ ತೆಗೆದಿದ್ದರಾದರೂ ಕಣ್ಣಿನ ನಿಖರತೆ ಬಗ್ಗೆ ಹೇಳಲು ವೈದ್ಯರು ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ.
ಇದೀಗ ಮಂಗಳೂರಿನ ಕೆ.ಎಂ.ಸಿ. ಅತ್ತಾವರ ಆಸ್ಪತ್ರೆಯಲ್ಲಿ ಸಅದ್ನನ್ನು ದಾಖಲಿಸಲಾಗಿದ್ದು, ಬಡ ಕುಟುಂಬದವರಾಗಿರುವ ಸಅದ್ನ ಹೆತ್ತವರಿಗೆ ಲಕ್ಷಾಂತರ ರೂ. ಒಟ್ಟುಗೂಡಿಸಲು ಕಷ್ಟವಾಗಿದ್ದು, ಚಿಕಿತ್ಸಾ ವೆಚ್ಚಕ್ಕಾಗಿ ದಾನಿಗಳಿಂದ ನೆರವು ಯಾಚಿಸಿದ್ದಾರೆ.
ನೆರವು ನೀಡಲಿಚ್ಚಿಸುವವರು ಝುಬೈದ, ವೇಣೂರು ಶಾಖೆ ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 01502200055721, ಐಎಫ್ಸಿ ಕೋಡ್: ಎಸ್ವೈಎನ್ಬಿ0000150 ಗೆ ಕಳುಹಿಸಬಹುದು ಅಥವಾ ಅಶ್ರಫ್ ಕೆ. 9611931034 ಅವರನ್ನು ಸಂಪರ್ಕಿಸಬಹುದು.