ಸುಶ್ಮಾ ಸ್ವರಾಜ್ ನಿಧನಕ್ಕೆ ಪೇಜಾವರಶ್ರೀ ಸಂತಾಪ
ಉಡುಪಿ, ಆ.7: ವಿದೇಶಾಂಗ ಮಾಜಿ ಸಚಿವೆ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ನಿಧನಕ್ಕೆ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
‘‘ಸುಷ್ಮಾ ಸ್ವರಾಜ್ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ರಾಷ್ಟ್ರ ಸೇವೆ ಅಮೋಘವಾದದ್ದು. ವಿದೇಶ ಮಂತ್ರಿಯಾಗಿ ಉತ್ತಮ ಕಾರ್ಯ ಮಾಡಿದವರು. ವಿದೇಶಗಳು ಸುಷ್ಮಾ ಸ್ವರಾಜ್ ಕಾರ್ಯವನ್ನು ಶ್ಲಾಘಿಸಿದೆ. ನಮ್ಮ ಜೊತೆ ಹಲವಾರು ವರ್ಷಗಳಿಂದ ಸಂಪರ್ಕದಲ್ಲಿದ್ದರು. ಸಂಘಟನೆ ಮತ್ತು ಆಡಳಿತ ನಡೆಸುವ ಸಮರ್ಥ ನಾಯಕಿ. ಅವರ ನಿಧನದಿಂದ ರಾಷ್ಟ್ರಕ್ಕೆ ದೊಡ್ಡ ನಷ್ಟ. ಕಾಶ್ಮೀರ ಗೊಂದಲ ಪರಿಹಾರ ಅವರ ಕೊನೆಯ ಆಸೆಯಾಗಿತ್ತು. ಅವರ ಟ್ವೀಟ್ ನಿಂದ ರಾಷ್ಟ್ರಾಭಿಮಾನ ಬಹಿರಂಗವಾಗಿದೆ. ಶ್ರೇಷ್ಠ ಚೇತನಕ್ಕೆ ಭಗವಂತನ ಅನುಗ್ರಹವಾಗಲಿ ಎಂದು ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ಸಂತಾಪ ಸೂಚಿಸಿದ್ದಾರೆ.
Next Story