ಬೈಕ್ ಅಡ್ಡಗಟ್ಟಿ ಸರ, ಮೊಬೈಲ್ ಸುಲಿಗೆ
ಮಣಿಪಾಲ, ಆ.9: ಬೈಕಿನಲ್ಲಿ ಬಂದ ನಾಲ್ವರ ತಂಡ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಚಿನ್ನದ ಸರ, ಮೊಬೈಲ್ ಸುಲಿಗೆ ಮಾಡಿರುವ ಘಟನೆ ಆ.9ರಂದು ನಸುಕಿನ ವೇಳೆ 1.15ರ ಸುಮಾರಿಗೆ ಸಗ್ರಿ ಶಾಲಾ ಕ್ರಾಸ್ ಬಳಿ ನಡೆದಿದೆ.
ಮೂಡುಸಗ್ರಿ ನಿವಾಸಿ ನರಸಿಂಹ ನಾಯಕ್ ಎಂಬವರ ತನ್ನ ಬೈಕಿನಲ್ಲಿ ಮಣಿಪಾಲದಿಂದ ಮನೆಯ ಹೋಗುತ್ತಿರುವಾಗ ಹಿಂದಿನಿಂದ ಕೆಟಿಎಂ ಹಾಗೂ ಕಪ್ಪುಬಣ್ಣದ ಹೊಂಡಾ ಆಕ್ಟೀವಾ ಸ್ಕೂಟರ್ನಲ್ಲಿ ಬಂದ ನಾಲ್ವರು, ನರಸಿಂಹ ನಾಯಕ್ಗೆ ಕೋಲಿನಿಂದ ಹೊಡೆದು ಅವರ ಬಳಿ ಇದ್ದ 24 ಗ್ರಾಂ ತೂಕದ 70,000 ರೂ. ಮೌಲ್ಯದ ಚಿನ್ನದ ಸರ, 29 ಸಾವಿರ ರೂ. ಮೌಲ್ಯದ ಮೊಬೈಲ್, ಪರ್ಸ್ನಲ್ಲಿದ್ದ 31,000ರೂ. ನಗದು, ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ಗುರುತು ಚೀಟಿ, ಪಾನ್ಕಾರ್ಡ್ಗಳನ್ನು ಸುಲಿಗೆ ಮಾಡಿ ಪರಾರಿಯಾದರೆಂದು ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story