ದ.ಕ. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯದಿನಾಚರಣೆ
ಮಂಗಳೂರು: ದ.ಕ. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಧ್ವಜಾರೋಹಣ ಮಾಡಿ, ನಂತರ ಮಾತನಾಡಿದ ಅವರು ಭಾರತ ದೇಶ ಅಭಿವೃದ್ಧಿಯಲ್ಲಿ ನಾವೆಲ್ಲರೂ ಜೊತೆಗೂಡಿ ಶ್ರಮಿಸಬೇಕೆಂದು ಕರೆ ನೀಡಿದರು.
ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ, ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಮಾತನಾಡಿದರು. ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಸುಮತಿ ಹೆಗ್ಡೆ ಶುಭಾಶಯ ಕೋರಿದರು. ಪಕ್ಷದ ಮುಖಂಡರಾದ ರಾಂ ಗಣೇಶ್, ರತ್ನಾಕರ್ ಸುವರ್ಣ, ಗೋಪಾಲಕೃಷ್ಣ ಅತ್ತಾವರ, ಮಧುಸೂದನ್ ಗೌಡ, ಕಾರ್ಪೊರೇಟರ್ ಗಳಾದ ಅಝೀಝ್ ಕುದ್ರೋಳಿ, ರಮೀಝಾ ಬಾನು ಹಾಗೂ ಮುಹಮ್ಮದ್ ಬೆಂಗ್ರೆ, ಫ್ರಾನ್ಸಿಸ್ ಫೆರ್ನಾಂಡಿಸ್, ಲತೀಫ್ ವಳಚ್ಚಿಲ್, ಇಝಾ ಬಜಾಲ್ ಹಾಗು ಇತರರು ಉಪಸ್ಥಿತರಿದ್ದರು.
Next Story