ಕೊಡಾಜೆ ಮದರಸದಲ್ಲಿ ಸ್ವಾತಂತ್ರ್ಯೋತ್ಸವ
ವಿಟ್ಲ: ಕೊಡಾಜೆ ಬದ್ರಿಯ ಜುಮಾ ಮಸೀದಿ ಹಾಗೂ ತರ್ಬಿಯತುಲ್ ಇಸ್ಲಾಂ ಮದ್ರಸ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ವನ್ನು ಕೊಡಾಜೆಯ ಮದರಸ ವಠಾರದಲ್ಲಿ ಆಚರಿಸಲಾಯಿತು.
ಮಸೀದಿ ಉಸ್ತುವಾರಿಗಳಾದ ಹಾಜಿ ಮಹಮ್ಮದ್ ರಫೀಕ್ ಸುಲ್ತಾನ್ ಧ್ವಜಾರೋಹಣಗೈದರು. ಇಬ್ರಾಹಿಂ ರಾಜ್ ಕಮಲ್ ಅದ್ಯಕ್ಷತೆ ವಹಿಸಿದ್ದರು.
ಮದ್ರಸ ಮುಖ್ಯೋಪಾಧ್ಯಾಯ ಕೆ ಎಲ್ ಉಮರ್ ದಾರಿಮಿ ಪಟ್ಟೋರಿ ಹಾಗೂ ಇಲ್ಯಾಸ್ ನೇರಳಕಟ್ಟೆ ಸ್ವಾತಂತ್ರೋತ್ಸವ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎನ್.ಕೆ.ಕಾಸಿಂ ನೇರಳಕಟ್ಟೆ, ಹಬೀಬ್ ಕೊಡಾಜೆ, ಸಲೀಂ ಶಾಲಿ ಕೊಡಾಜೆ, ರಝಾಕ್ ಕೊಡಾಜೆ, ರಹೀಂ ಸುಲ್ತಾನ್, ಫಾರೂಕ್ ಗೋಳಿಕಟ್ಟೆ, ಬದ್ರುದ್ದೀನ್ ನೇರಳಕಟ್ಟೆ, ಕಾದರ್ ಪಂತಡ್ಕ, ಅಶ್ರಫ್ ಗುಲ್ಜಾರ್ ಮೊದಲಾದವರು ಉಪಸ್ಥಿತರಿದ್ದರು. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.
Next Story