ಗೃಹರಕ್ಷಕ ದಳದ ಸಿಬ್ಬಂದಿಗೆ ನೆರವು
ಮಂಗಳೂರು,ಆ.19: ದ.ಕ. ಜಿಲ್ಲಾ ಗೃಹರಕ್ಷಕ ದಳದ ಬೆಳ್ತಂಗಡಿ ಘಟಕದ ಸಿಬ್ಬಂದಿ ಶಿವಾಕ್ಷ ಅವರ ಹೊಸದಾಗಿ ನಿರ್ಮಿಸಿದ ಮನೆ ಭಾರೀ ಮಳೆಯಿಂದ ಭಾಗಶ: ಹಾನಿಯಾಗಿತ್ತು. ಆ ಹಿನ್ನೆಲೆಯಲ್ಲಿ ದ.ಕ. ಗೃಹರಕ್ಷಕದ ದಳದ ಅಧಿಕಾರಿ-ಸಿಬ್ಬಂದಿ ವರ್ಗವು ಸಂಗ್ರಹಿಸಿದ 11,111 ರೂ. ಮೊತ್ತ ಮತ್ತು 25 ಕೆ.ಜಿ. ಅಕ್ಕಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲಾ ಸಮಾದೇಷ್ಠ ಡಾ. ಮುರಲಿ ಮೋಹನ್ ಚೂಂತಾರು ಹಾಗೂ ಉಪ ಸಮಾದೇಷ್ಠ ರಮೇಶ್ ಮತ್ತಿತರರಿದ್ದರು.
Next Story