ಖಿದ್ಮತುಲ್ ಇಸ್ಲಾಮ್ನ ವಾರ್ಷಿಕ ಮಹಾಸಭೆ
ಮಂಗಳೂರು, ಆ.19:ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್(ರಿ)ಉಕ್ಕುಡ ಇದರ 2019-2020ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಸಮಿತಿಯ ಗೌರವಾಧ್ಯಕ್ಷ ಕೆ.ಬಿ.ಇಬ್ರಾಹಿಂರ ಅಧ್ಯಕ್ಷಯಲ್ಲಿ ಜರಗಿತು.
ರಿಫಾಯಿ ಮಸೀದಿಯ ಖತೀಬ್ ನಾಸಿರ್ ಅಝ್ಹರಿ ದುಆಗೈದರು. ಕಾರ್ಯದರ್ಶಿ ಫಾರೂಕ್ ಕಿನ್ಯ ಸ್ವಾಗತಿಸಿದರು. ಹಾಲಿ ಸಮಿತಿಯನ್ನೇ ಮುಂದಿನ ಸಾಲಿಗೆ ಪುನರಾಯ್ಕೆ ಮಾಡಲಾಯಿತು.ಖಾಲಿಯಾಹಿರುವ ಉಪಾಧ್ಯಕ್ಷ ಸ್ಥಾನಕ್ಕೆ ಆಸಿಫ್ ಲೋನಾವಾಲಾ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಬೂಸಾಲಿ ಉಕ್ಕುಡ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಅಧ್ಯಕ್ಷ ಕೆ.ಬಿ.ಅಬ್ಬಾಸ್, ಮಸೀದಿಯ ಯೂಸುಫ್ ಮಜಲ್, ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ ಮಜಲ್ ಮತ್ತಿತರರು ಉಪಸ್ಥಿತರಿದ್ದರು.
Next Story