ಯಡಿಯೂರಪ್ಪ ಅಪ್ಪ ಅಲ್ಲ ಅಜ್ಜ: ರಮಾನಾಥ ರೈ
ಪಡುಬಿದ್ರೆ: ಯಡಿಯೂರಪ್ಪ ಅಪ್ಪ ಅಲ್ಲ ಅಜ್ಜ: ಮುಖ್ಯಮಂತ್ರಿ ಯಡಿಯೂರಪ್ಪ ಅಪ್ಪ ಅಲ್ಲ. ಅವರು ಅಜ್ಜ. ಈ ರೀತಿ ಹೇಳಿ ಹಾಸ್ಯ ಚಟಾಕಿ ಹಾರಿಸಿದವರು ರಮನಾಥ ರೈ. ಯಡಿಯೂರಪ್ಪ ಸರ್ಕಾರ ಸುಭದ್ರವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ರೈ ಅವರು ಈ ರೀತಿ ಉತ್ತರಿಸಿದರು.
ಕೋಟ ಶ್ರೀನಿವಾಸ ಪೂಜಾರಿಗೆ ನೈಜತೆ ಗೊತ್ತಾಗುತ್ತದೆ: ದ.ಕ ಜಿಲ್ಲೆ, ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಶುಭ ಹಾರೈಸಿದ ಯು.ಟಿ. ಖಾದರ್, ಎರಡು ಜಿಲ್ಲೆಯ ಸಂಕಷ್ಟವನ್ನು ಅರಿತುಕೊಂಡು ಸಮಗ್ರ ಅಭಿವೃದ್ಧಿಗಾಗಿ ತೊಡಗಿಸಿಕೊಳ್ಳಬೇಕು. ನಾವು ಸಚಿವರಾಗಿದ್ದಾಗ ಕೆಲವೊಂದು ಬೇಡಿಕೆಯನ್ನು ಕೋಟ ಶ್ರೀನಿವಾಸ ಪೂಜಾರಿ ಇಟ್ಟುಕೊಂಡಿದ್ದರು. ಧರಣಿ ಮಾಡಿದ್ದರು. ಅವರ ಬೇಡಿಕೆಯನ್ನು ನಮ್ಮಿಂದ ಆದಷ್ಟು ಪರಿಹರಿಸಿದ್ದೇವೆ. ಅಂದು ಯಾವ ಕೆಲಸ ಆಗದೆ ಧರಣಿ ಕುಳಿತುಕೊಂಡಿದ್ದರು. ಆ ಬೇಡಿಕೆಯನ್ನು ಸಚಿವರಾಗಿ ಅವರು ಮಾಡಬೇಕು. ಆಗ ಬೇಡಿಕೆಯ ನೈಜತೆ ಏನು ಎಂದು ಜನರಿಗೆ ಆಗ ಅರಿವಾಗುತ್ತದೆ ಎಂದು ಖಾದರ್ ಒತ್ತಾಯಿಸಿದರು.
Next Story