ಎಸ್ ಡಿ ಪಿ ಐ: ಮಂಗಳೂರು ಉತ್ತರ ವಿಧಾನಸಭಾ ನೂತನ ಅಧ್ಯಕ್ಷರಾಗಿ ಅಯಾಝ್ ಕೃಷ್ಣಾಪುರ ಆಯ್ಕೆ
ಮಂಗಳೂರು: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಇದರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಯಾಝ್ ಕೃಷ್ಣಾಪುರ ಆಯ್ಕೆಯಾದರು.
ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲ ಜೊಕಟ್ಟೆ ನೇತೃತ್ವದಲ್ಲಿ ಕಾವೂರು ಕಚೇರಿಯಲ್ಲಿ ಸಭೆ ನಡೆಯಿತು. ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅಯಾಝ್ ಅವರನ್ನು ಜಿಲ್ಲಾಧ್ಯಕ್ಷ ಅತಾವುಲ್ಲ ಅವರು ಪಕ್ಷದ ಶಾಲು ಹೊದಿಸಿ, ಪತಾಕೆ ನೀಡಿ ಗೌರವಿಸಿದರು.
ಸಮಿತಿಗೆ ನೂತನ ಜೊತೆಕಾರ್ಯದರ್ಶಿಯಾಗಿ ಅಶ್ರಫ್ ಅಡ್ಡೂರು, ಸಾಜುದ್ದೀನ್ ಮಂಜೂರು ಆಯ್ಕೆಯಾದರು.
ಸಭೆಯಲ್ಲಿ ಅಝರ್ ಚೊಕ್ಕಬೆಟ್ಟು, ನಾಸಿರ್ ಉಲಾಯಿಬೆಟ್ಟು, ಹನೀಫ್ ಕಾವೂರ್, ನೂರುಲ್ಲಾ ಕುಲಾಯಿ, ಇಸ್ಮಾಯಿಲ್ ಸುರತ್ಕಲ್, ಯಾಸೀನ್ ಅರ್ಕುಲ, ಝಫರುಲ್ಲಾ, ರಫೀಕ್, ಅಯುಬ್, ಶಮೀರ್, ಖಾದರ್, ಉಸ್ಮಾನ್ ಗುರುಪುರ, ಅಬೂಬಕರ್ ಕುಲಾಯಿ ಹಾಗು ಇತರರು ಉಪಸ್ಥಿತರಿದ್ದರು.
Next Story