ಫೆ. 21ರಿಂದ ಕಣ್ಣಂಗಾರ್ ಉರೂಸ್: ದರ್ಗಾ ಸಮಿತಿಯ ಅಧ್ಯಕ್ಷರಾಗಿ ಯು.ಕೆ. ಅಬ್ದುಲ್ ಹಮೀದ್
ಅಬ್ದುಲ್ ಹಮೀದ್
ಪಡುಬಿದ್ರಿ: ಕಣ್ಣಂಗಾರ್ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹ್ ದರ್ಗಾ ಸಮಿತಿಯ ಅಧ್ಯಕ್ಷರಾಗಿ ಯು.ಕೆ. ಅಬ್ದುಲ್ ಹಮೀದ್ ಮಿಲಾಫ್ ಆಯ್ಕೆಯಾಗಿದ್ದಾರೆ.
ಜಮಾಅತ್ ಅಧ್ಯಕ್ಷ ಎಚ್.ಬಿ.ಮುಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆದಿದೆ.
ಉಪಾಧ್ಯಕ್ಷರಾಗಿ ಇಬ್ರಾಹಿಮ್ ಸನಾ, ಅಬ್ದುಲ್ ರೆಹಿಮಾನ್ ಪುತ್ತು, ಇಬ್ರಾಹಿಂ ಖಲೀಲ್ ಎಸ್.ಎಸ್. ರೋಡ್, ಕಾರ್ಯದರ್ಶಿ ಎಂ.ಎಸ್. ಸಿರಾಜ್, ಜತೆ ಕಾರ್ಯದರ್ಶಿ ಎಂ. ಹುಸೈನ್ ಎನ್.ಎಸ್. ರೋಡ್, ರಶೀದ್ ಗುಂಡಿ, ಕೋಶಾಧಿಕಾರಿ ಕಬೀರ್ ಹಾಜಿ ಎನ್.ಎಸ್. ರೋಡ್, ಸಂಚಾಲಕರಾಗಿ ಶಾಹುಲ್ ಹಮೀದ್ ನಹೀಮಿ ಆಯ್ಕೆ ಮಾಡಲಾಗಿದೆ.
ಮಸೀದಿಯ ಖತೀಬ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ದರ್ಗಾದಲ್ಲಿ ಝಿಯಾರತ್ನೊಂದಿಗೆ ಸಭೆಗೆ ಚಾಲನೆ ನೀಡಲಾಯಿತು. ಶಾಹುಲ್ ಹಮೀದ್ ನಹೀಮಿ ದುಆ ನೆರವೇರಿಸಿದರು.
ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹ್ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಫೆ.21ರಿಂದ 29ರವರೆಗೆ ನಡೆಯಲಿದೆ.
21ರಂದು ಉರೂಸ್ಗೆ ಚಾಲನೆ ನೀಡಲಿದ್ದು, 28ರವರೆಗೆ ಧಾರ್ಮಿಕ ಮತಪ್ರವಚನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.