ಆಂಧ್ರ ಮೂಲದ ಯುವಕ ನಾಪತ್ತೆ
ಮಂಗಳೂರು, ಸೆ.9: ಮಂಗಳೂರಿನ ದಕ್ಕೆಯಲ್ಲಿ ಕೆಲಸ ಮಾಡಿಕೊಂಡಿದ್ದ ಆಂಧ್ರಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾರೆ.
ಆಂಧ್ರಪ್ರದೇಶದ ಶ್ರೀಕಕುಲಂ ಜಿಲ್ಲೆಯ ಕಾಳಿಂಗಪಟ್ಟಣಂ ನಿವಾಸಿ ಮಗುಪಿಳ್ಳಿ ಶ್ರೀನು (35) ನಾಪತ್ತೆಯಾದ ಯುವಕ.
ಮಂಗಳೂರಿನ ದಕ್ಕೆಯ ಬೋಟ್ವೊಂದರಲ್ಲಿ ಕಳೆದ ಒಂದೂವರೆ ವರ್ಷದಿಂದ ಮೀನಿನ ಕೆಲಸ ಮಾಡಿಕೊಂಡಿದ್ದಾನೆ. ಆ.25ರಂದು ರಾತ್ರಿ 8 ಗಂಟೆಗೆ ಮಗುಪಿಳ್ಳಿ ಶ್ರೀನು ಬೋಟಿನ ಕೆಲಸ ಮುಗಿಸಿಕೊಂಡು ಬೋಟಿನಿಂದ ಇಳಿದು ಹೊರ ಹೋದವರು ವಾಪಸಾಗಿಲ್ಲ. ಸಂಬಂಧಿಕರಲ್ಲಿ ವಿಚಾರಿಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಹರೆ: 5.6 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಬರ್ಮುಡಾ, ನೀಲಿ ಬಣ್ಣದ ಶರ್ಟ್ ಧರಿಸಿದ್ದರು. ತೆಲುಗು, ಹಿಂದಿ ಮಾತನಾಡುತ್ತಾರೆ.
ನಾಪತ್ತೆಯಾದ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ (0824- 2220518)ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story