ಮಂಗಳೂರು: ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
ಮಂಗಳೂರು, ಸೆ.10: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ಮೃತಪಟ್ಟ ಘಟನೆ ಬಜ್ಪೆ ಸಮೀಪದ ಅರಸುಲ ಪದವು ಎಂಬಲ್ಲಿ ಮಂಗಳವಾರ ನಡೆದಿದೆ.
ತೊಕ್ಕೊಟ್ಟು ಮುನ್ನೂರು ನಿವಾಸಿ ನಿಶಾಲ್ (21) ಮೃತ ಯುವಕ.
ಘಟನೆ ವಿವರ
ಮಂಗಳವಾರ ಮಧ್ಯಾಹ್ನ ಮಂಗಳೂರು ತಾಲೂಕಿನ ಬಡಗ-ಎಕ್ಕಾರು ಸಮೀಪದ ಅರಸುಲ ಪದವು ಎಂಬಲ್ಲಿ ತೇಜಸ್, ರಿತೇಶ್, ರಾಜೇಶ್, ವರುಣ್, ರಕ್ಷಿತ್, ಕೇತನ್, ನಿಖಿಲ್ ಜತೆ ನಿಶಾಲ್ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ನಿಶಾಲ್ ಕಾಲುಜಾರಿ ಆಳವಾದ ನೀರಿಗೆ ಬಿದ್ದು ಮುಳುಗಿದ್ದನೆನ್ನಲಾಗಿದ್ದು, ಈ ವೇಳೆ ಆತನ ಸ್ನೇಹಿತರು ಬೊಬ್ಬೆ ಹಾಕಿದ್ದಾರೆ. ಬೊಬ್ಬೆ ಕೇಳಿದ ಸ್ಥಳೀಯರು ಬಂದು ನಿಶಾಲ್ನನ್ನು ನೀರಿನಿಂದ ಹೊರತಂದು ಬಜ್ಪೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಪರೀಕ್ಷಿಸಿದ ವೈದ್ಯರು ನಿಶಾಲ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story