ಉಡುಪಿ: ಮೂಳೆ ಖನಿಜ ಸಾಂದ್ರತೆ ತಪಾಸಣೆ ಶಿಬಿರ
ಉಡುಪಿ, ಸೆ.12: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಮತ್ತು ಉಡುಪಿ ಬ್ರಹ್ಮಗಿರಿಯ ಸಾಯಿರಾಧ ಪ್ರೈಡ್ ವತಿಯಿಂದ 2ನೇ ದಿನದ ಮೂಳೆ ಖನಿಜ ಸಾಂದ್ರತೆ ತಪಾಸಣಾ ಶಿಬಿರವು ಉಡುಪಿಯ ಸಾಯಿರಾಧ ಪ್ರೈಡ್ ಅಪಾರ್ಟ್ ಮೆಂಟ್ ಅಸೋಸಿಯೇಶನ್ ನ ಕಚೇರಿಯಲ್ಲಿ ಗುರುವಾರ ನಡೆಯಿತು.
ಶಿಬಿರವನ್ನು ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ, ಅಪಾರ್ಟ್ ಮೆಂಟ್ ಅಸೋಸಿಯೇಶನ್ ಕಾರ್ಯದರ್ಶಿ ದಿನಕರ್ ಅಮೀನ್ ಮತ್ತು ಅಪಾರ್ಟ್ ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ರಾಜ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಜಯಂಟ್ಸ್ ಯುನಿಟ್ ಡೈರೆಕ್ಟರ್ ರಮೇಶ್ ಪೂಜಾರಿ, ಜಯಂಟ್ಸ್ ಉಡುಪಿ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರ್ , ಉಪಾಧ್ಯಕ್ಷ ಇಕ್ಬಾಲ್ ಮನ್ನಾ, ಪೂರ್ವಾಧ್ಯಕ್ಷರಾದ ಉಷಾ ರಮೇಶ್, ಜಯಂಟ್ಸ್ ಡಿ.ಎ., ಯಶವಂತ್
ಮತ್ತು ಜಯಂಟ್ಸ್ ಸದಸ್ಯರು, ಅಪಾರ್ಟ್ ಮೆಂಟ್ ಅಸೋಸಿಯೇಶನ್ ಸದಸ್ಯರು ಉಪಸ್ಥಿತರಿದ್ದರು.
ಉಡುಪಿಯ ಉಡುಪಿಯ 450 ಮನೆಗಳಿರುವ ಸಾಯಿರಾಧ ಪ್ರೈಡ್ ನ ನಿವಾಸಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
Next Story