ಪುತ್ತೂರು: ಬೈಕ್ ಸ್ಕಿಡ್; ಓರ್ವನಿಗೆ ಗಾಯ
ಪುತ್ತೂರು: ರಸ್ತೆ ಹೊಂಡ ತಪ್ಪಿಸುವ ಯತ್ನದಲ್ಲಿ ಬೈಕೊಂದು ಸ್ಕಿಡ್ ಆಗಿ ಉರುಳಿ ಬಿದ್ದು ಸಹಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ದೇರಾಜೆ ಬೀಡು ಎಂಬಲ್ಲಿ ಗುರುವಾರ ನಡೆದಿದೆ.
ದೇರಾಜೆ ನಿವಾಸಿ ರಮೇಶ್ ಎಂಬವರು ಗಾಯಗೊಂಡ ಸಹಸವಾರ. ದೇರಾಜೆಯಿಂದ ಪುತ್ತೂರು ಕಡೆಗೆ ರಾಜೇಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ರಸ್ತೆ ಮಧ್ಯೆ ಇದ್ದ ಹೊಂಡ ತಪ್ಪಿಸುವ ಯತ್ನದಲ್ಲಿ ಹತೋಟಿ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಸಹಸವಾರ ರಮೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
Next Story