ಮೈಸೂರು ವಿಭಾಗೀಯ ಮಟ್ಟಕ್ಕೆ ಅಲ್ಇಹ್ಸಾನ್ ಕಬಡ್ಡಿ ತಂಡ ಆಯ್ಕೆ
ಕಾಪು, ಸೆ.14: ಉಡುಪಿ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ಸಹ ಯೋಗದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಮೂಳೂರು ಅಲ್ -ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೈಸೂರು ವಿಬಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉತ್ತಮ ದಾಳಿಗಾರನಾಗಿ ಮುಹಮ್ಮದ್ ರಾಶಿಕ್, ಆಲ್-ರೌಂಡರ್ ಆಗಿ ಮುಹಮ್ಮದ್ ಶಹೀಮ್ ವೈಯಕ್ತಿಕ ಪ್ರಶಸ್ತಿ ಗಳಿಸಿದ್ದಾರೆ. ಚಿತ್ರದಲ್ಲಿ ಶಾಲಾ ಪ್ರಾಂಶುಪಾಲ ಕೆ.ಎಸ್.ಹಬೀಬು ರ್ರಹ್ಮಾನ್, ಮುಖ್ಯೋಪಾಧ್ಯಾಯಿನಿಯರಾದ ಪ್ರಮೀಳಾ ಎಸ್.ಅಮೀನ್, ಮಮತಾ ಪೂಜಾರಿ, ದೈಹಿಕ ಶಿಕ್ಷಣ ಶಿಕ್ಷಕರಾದ ಬಶೀರ್ ಎಂ. ಮೂರುಗೋಳಿ, ಸದ್ದಾಮ್ ಹುಸೇನ್ ಮತ್ತು ಸುಮನ ಕಿಶೋರ್ ಅವರನ್ನು ಕಾಣಬಹುದು.
Next Story