ಹಳೆಯಂಗಡಿ: ಎಸ್ಕೆಎಸ್ಸೆಸ್ಸೆಫ್ ವಿಖಾಯ ವತಿಯಿಂದ ಶ್ರಮದಾನ ಕಾರ್ಯಕ್ರಮ
ಹಳೆಯಂಗಡಿ: ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆದೇಶ ಮೇರೆಗೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ಹಳೆಯಂಗಡಿ ಮತ್ತು ಬೊಳ್ಳೂರು ಜಂಟಿ ಆಶ್ರಯದಲ್ಲಿ ಬೊಳ್ಳೂರು ಜುಮಾ ಮಸೀದಿ ಪರಿಸರ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ರವಿವಾರ ಬೆಳಗ್ಗೆ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಎಸ್ಕೆಎಸ್ಸೆಸ್ಸೆಫ್ ವಿಖಾಯ ಚೇರ್ಮ್ಯಾನ್ ಹುಸೈನಬ್ಬ ಬೊಳ್ಳೂರು ವಹಿಸಿದ್ದರು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಎಮ್.ಅಬ್ದುಲ್ ಖಾದರ್, ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಅಧ್ಯಕ್ಷ ಯುಸೂಫ್ ಇಂದಿರಾನಗರ, ಕಾರ್ಯದರ್ಶಿ ದಾವೂದ್ ಇಂದಿರಾನಗರ, ಹಿರಿಯ ಸದಸ್ಯರಾದ ಕೆ.ಎ ಅಬೂಬಕ್ಕರ್, ತಯ್ಯೂಬ್ ಫೈಝಿ ಬೊಳ್ಳೂರು, ಶಿಹಾಬುದ್ದೀನ್ ಅಹ್ಮದ್, ಸಂಶುದ್ದೀನ್ ರೈಲ್ವೆಗೇಟ್, ಆಶಿಕ್ ಹಳೆಯಂಗಡಿ, ಅಲ್ಫಾಝ್, ಬಾಯಿಶ್, ಝೈನುದ್ದೀನ್, ಬಾಶಿತ್, ಉಸ್ಮಾನ್ ಸಾಗ್ ಸೇರಿ ಮತ್ತಿತರು ಉಪಸ್ಥಿತರಿದ್ದರು.