ಸೆ.21: ಯುನಿವೆಫ್ ನಿಂದ ಕಚ್ಚೀ ಮಸೀದಿಯಲ್ಲಿ ಕುರ್ ಆನ್ ಅಭಿಯಾನ
ಮಂಗಳೂರು, ಸೆ.20: ಯುನಿವೆಫ಼್ ಕರ್ನಾಟಕ ಪ್ರತಿ ವರ್ಷದಂತೆ ಈ ವರ್ಷವೂ "ಓದಿರಿ ಸೃಷ್ಟಿಕರ್ತನ ಸಂದೇಶವನ್ನು" ಎಂಬ ಕುರ್ ಆನ್ ಪರಿಚಯ ಅಭಿಯಾನವನ್ನು ದ.ಕ. ಜಿಲ್ಲಾದ್ಯಂತ ಆಗಸ್ಟ್ 27 ರಿಂದ ಸೆಪ್ಟೆಂಬರ್ 27 ರ ವರೆಗೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ಸೆ.21ರಂದು ಮಗ್ರಿಬ್ ನಮಾಝ್ ಬಳಿಕ ನಗರದ ಕಚ್ಚೀ ಮಸೀದಿಯಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಯುನಿವೆಫ಼್ ಅಧ್ಯಕ್ಷ ಮತ್ತು ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿಯವರಿಂದ "ಜಗವ ಬದಲಿಸಿದ ಕ್ರಾಂತಿಕಾರಿ ಗ್ರಂಥ" ಎಂಬ ವಿಷಯದಲ್ಲಿ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ
Next Story