ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಪ್ಲ್ಯಾಸ್ಟಿಕ್ ಮುಕ್ತ ಜಾಗೃತಿ ಕಾರ್ಯಕ್ರಮ
ವಾರದ ಸಂತೆಯಲ್ಲಿ ಬಟ್ಟೆ ಬ್ಯಾಗ್ ವಿತರಣೆ
ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ-ಜಯಂಟ್ಸ್ ಸಪ್ತಾಹದ ಎರಡನೆಯ ದಿನದ ಕಾರ್ಯಕ್ರಮವಾಗಿ ಪ್ಲ್ಯಾಸ್ಟಿಕ್ ಮುಕ್ತ ಜಾಗ್ರತಿ ಕಾರ್ಯಕ್ರಮ ಮತ್ತು ವಾರದ ಸಂತೆಯಲ್ಲಿ ಬಟ್ಟೆ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.
ಆದಿ ಉಡುಪಿಯ ವಾರದ ಸಂತೆಯಲ್ಲಿ ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯರಾದ ದಿನಕರ್ ಅಮೀನ್ ಮತ್ತು ಜಯಂಟ್ಸ್ ಯುನಿಟ್ ಡೈರೆಕ್ಟರ್ ಜ| ರಮೇಶ್ ಪೂಜಾರಿಯವರು ಸಂತೆ ಮಾರ್ಕೆಟ್ ನಲ್ಲಿ ಬಟ್ಟೆ ಬ್ಯಾಗನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಯಂಟ್ಸ್ ಉಡುಪಿಯ ಅಧ್ಯಕ್ಷ ಜ| ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್, ಯುನಿಟ್ ಆಫಿಸರ್ ತೇಜೇಶ್ವರ್ ರಾವ್, ಉಪಾಧ್ಯಕ್ಷ ಜ| ಇಕ್ಬಾಲ್ ಮನ್ನಾ, ಡೈರೆಕ್ಟರ್ ಅಡ್ಮಿನಿಸ್ಟ್ರೇಶನ್ ಜ|ಯಶವಂತ ಸಾಲಿಯಾನ್, ನಿಕಟ ಪೂರ್ವ ಅಧ್ಯಕ್ಷ ರಾದ ಜ|ಆನಂದ ಉದ್ಯಾವರ್, ಪೂರ್ವಾಧ್ಯಕ್ಷರುಗಳಾದ ಜ| ಜಗದೀಶ್ ಅಮೀನ್, ಜ|ರಾಜೇಶ್ ಶೆಟ್ಟಿ, ಜ| ಉಷಾ ರಮೇಶ್ ಜ| ದೇವದಾಸ್ ಕಾಮತ್, ಜ|ವಿನ್ಸೆಂಟ್ ಸಲ್ಡಾನ, ಜ| ಪ್ರಭಾಕರ್ ಬಂಗೇರ, ಜ|ಗಣೇಶ್ ಉರಾಳ್, ಜ| ಗಣೇಶ್ ಶೆಟ್ಟಿಗಾರ್ ಮತ್ತು ಜಯಂಟ್ಸ್ ನ ಇತರ ಸದಸ್ಯರು ಉಪಸ್ಥಿತರಿದ್ದರು.
ಸಾರ್ವಜನಿಕರು, ತರಕಾರಿ ಮಾರಾಟಗಾರರು ಮತ್ತು ಇತರ ವ್ಯಾಪಾರಿಗಳಿಂದ ಉತ್ತಮ ಪ್ರತಿಕ್ರಿಯೆ ಮತ್ತು ಶ್ಲಾಘನೆ ವ್ಯಕ್ತವಾಯಿತು.