ಭಾರತೀಯ ಕೋಸ್ಟ್ ಗಾರ್ಡ್, ಎನ್.ಐ.ಟಿ.ಕೆ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆ
ಸುರತ್ಕಲ್: ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆಯ ಪ್ರಯುಕ್ತ ಭಾರತೀಯ ಕೋಸ್ಟ್ ಗಾರ್ಡ್ ಹಾಗೂ ಸುರತ್ಕಲ್ ಎನ್ಐಟಿಕೆಯ ಸಂಯುಕ್ತ ಆಶ್ರಯದಲ್ಲಿ ಸುರತ್ಕಲ್ ಬೀಚ್ನ್ನು ಶನಿವಾರ ಸ್ವಚ್ಛಗೊಳಿಸಲಾಯಿತು.
ಮುಖ್ಯ ಅಥಿತಿಯಾಗಿ ಎನ್ಐಟಿಕೆಯ ಡೈರೆಕ್ಟರ್ ಡಾ. ಉಮಾಮಹೇಶ್ವರ ರಾವ್, ಭಾರತೀಯ ಕೋಸ್ಟ್ ಗಾರ್ಡ್ನ ಕಮಾಂಡಿಂಗ್ ಅಧಿಕಾರಿ ಸಿಜಿಎಇ ಕಮಾಂಡೆಂಟ್ ನಾಗರಾಜ್ ಸಿಂಗ್, ಕಮಾಂಡೆಂಟ್ ಗೌರವ್ ಖರೆ ಸೇರಿದಂತೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಮತ್ತು ಎನ್ಐಟಿಕೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.