ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಸಮಿತಿಯಿಂದ ವಿಕೋವ ಕ್ಯಾಂಪ್
ಬೆಂಗಳೂರು: ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಸಮಿತಿಯಿಂದ ಜಿಲ್ಲಾ ವಿಸ್ಡಂ ಕನ್ವೀನರ್ ಹಾಗೂ ಡಿವಿಷನ್ ವಿಸ್ಡಂ ಕನ್ವೀನರ್ ಗಳ ವಿಕೋವ ಕ್ಯಾಂಪ್ ಬೆಂಗಳೂರಿನಲ್ಲಿ ಲಾಲ್ ಬಾಗ್ ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ನವಾಝ್ ಭಟ್ಕಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು,ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ರಾಜ್ಯ ಸದಸ್ಯರಾದ ಮುಸ್ತಫಾ ಮಾಸ್ಟರ್ ಉಳ್ಳಾಲ,ಸಫ್ವಾನ್ ಚಿಕ್ಕಮಗಳೂರು,ಶರೀಫ್ ಮಾಸ್ಟರ್ ಮಡಿಕೇರಿ ತರಗತಿಯನ್ನು ನಡೆಸಿದರು.
ಬೆಂಗಳೂರು ಜಿಲ್ಲಾಧ್ಯಕ್ಷ ಹಬೀಬ್ ನೂರಾನಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ನಾಯಕ ಹಕೀಂ ಬೆಂಗಳೂರು,ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ,ಉಬೈದುಲ್ಲಾ ಫರೀದ್ ನಗರ,ಶಬೀಬ್ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು.
Next Story