ದಾರುನ್ನೂರ್ 5ನೇ ವಾರ್ಷಿಕ, ಮೀಲಾದ್ ಸಮಾವೇಶ- ಸ್ವಾಗತ ಸಮಿತಿ ರಚನೆ
ದುಬೈ : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ಕಲ್ಚರಲ್ ಸೆಂಟರ್ ತನ್ನ 5 ನೇ ವಾರ್ಷಿಕ ಸಮ್ಮೇಳನ ಮತ್ತು ಮೇಹಫಿಲ್ ಏ ಮೀಲಾದುನ್ನಬಿ – 2019 ಸಮಾವೇಶವನ್ನು ನ.22 ರಂದು ಆಚರಿಸುವುದಾಗಿ ಸಂಶುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಾಹುಲ್ ಬಿ.ಸಿ ರೋಡ್ ದುಆ ಬಳಿಕ ಸಯ್ಯದ್ ಆಸ್ಕರ್ ಅಲಿ ತಂಞಳ್ ಉದ್ಘಾಟನೆಗೈದರು. ಬಳಿಕ 5 ನೇ ವಾರ್ಷಿಕ ಸಮ್ಮೇಳನ ಮತ್ತು ಮೆಹಫಿಲ್ ಏ ಮೀಲಾದುನ್ನಬಿ – 2019 ಕಾರ್ಯಕ್ರಮದ ರೂಪು ರೇಷೆಯನ್ನು ಸಿದ್ಧಪಡಿಸಲಾಯಿತು.
ಬೆಳಿಗ್ಗೆ 10 ರಿಂದ ರಾತ್ರಿ 11 ಗಂಟೆಯವರೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮಕ್ಕಳಿಗೆ , ವಯಸ್ಕರಿಗೆ ಮತ್ತು ಮಹಿಳೆಯರಿಗೆ ಧರ್ಮದ ಚೌಕಟ್ಟಿನೊಳಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಬುರ್ಧಾ ಮಜ್ಲಿಸ್ ಮತ್ತು ದಫ್ ಕಾರ್ಯ ಕ್ರಮಗಳನ್ನು ನಡೆಸಲಾಗುವುದು. ಮುಖ್ಯ ಪ್ರಭಾಷಕರಾಗಿ ಕುಮ್ಮನಮ್ ನಿಝಾಮುದ್ದೀನ್ ಅಲ್ ಅಝ್ ಹರಿ ಅಲ್ ಖಾಸಿಮಿ ಉಸ್ತಾದರು ಆಗಮಿಸಲಿರುವರು. ದಾರುನ್ನೂರ್ ಯು ಎ ಇ ಯಲ್ಲಿ ಕಳೆದ 5 ವರ್ಷಗಳಿಂದ ನಡೆಸಿದ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುವ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು. ಕಾರ್ಯಕ್ರಮ ನಡೆಯಲ್ಪಡುವ ಸ್ಥಳದ ಬಗ್ಗೆ ಬಳಿಕ ಮಾಹಿತಿ ನೀಡಲಾಗುವುದು.
ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲು ಸ್ವಾಗತ ಸಮಿತಿಯೊಂದನ್ನು ರಚಿಸಲಾಯಿತು.
ಉಪದೇಶಕರು: ಸಯ್ಯದ್ ಅಸ್ಕರ್ ಅಲಿ ತಂಞಳ್ ಕೋಲ್ಪೆ , ಮಹಮ್ಮದ್ ಮುಸ್ತಾಕ್ ಕದ್ರಿ , ಸಂಶುದ್ದೀನ್ ಸೂರಲ್ಪಾಡಿ , ಸಲೀಂ ಅಲ್ತಾಫ್ ಫರಂಗಿಪೇಟೆ , ರವೂಫ್ ಹಾಜಿ ಕೈಕಂಬ ಅಬ್ದುಲ್ ಸಲಾಂ ಬಪ್ಪಳಿಗೆ, ಚೇರ್ಮೇನ್ : ಬದ್ರುದ್ದೀನ್ ಹೆಂತಾರ್, ಕಾರ್ಯದರ್ಶಿ : ಮಹಮ್ಮದ್ ರಫೀಕ್ ಸುರತ್ಕಲ್, ಕೋಶಾಧಿಕಾರಿ : ಸಿರಾಜ್ ಬಿ.ಸಿ ರೋಡ್, ಕನ್ವೀನರ್ ಗಳು: ಮಹಮ್ಮದ್ ರಫೀಕ್ ಆತೂರು, ಮಹಮ್ಮದ್ ಮಾಡಾವು , ಸಾಜಿದ್ ಬಜ್ಪೆ, ಸಮೀರ್ ಇಬ್ರಾಹಿಂ ಕಲ್ಲರೆ, ಹನೀಫ್ ಕೆ.ಪಿ ಮೂಡಬಿದ್ರಿ , ನವಾಝ್ ಬಿ.ಸಿ ರೋಡ್ , ಅಶ್ರಫ್ ಪರ್ಲಡ್ಕ , ಅಶ್ರಫ್ ಬಾಳೆಹೊನ್ನೂರ್ , ಅನ್ಸಾಫ್ ಪಾತೂರು , ಸಫಾ ಇಸ್ಮಾಯಿಲ್ ಬಜ್ಪೆ, ಅಶ್ರಫ್ ಪಾವೂರ್, ನಾಸಿರ್ ಬಪ್ಪಳಿಗೆ , ಅಬ್ದುಲ್ ರಝಾಕ್ ಸೊಂಪಾಡಿ , ಅಶ್ರಫ್ ಬಾಂಬಿಲ , ನವಾಝ್ ಮನಲ್ , ಅಬೂಬಕ್ಕರ್ ಸಿದ್ದೀಕ್ ಮೂಡಬಿದ್ರಿ , ಉಸ್ಮಾನ್ ಕೆಮ್ಮಿಂಜೆ , ಇಫ್ತಿಕಾರ್ ಅಡ್ಯಾರ್ ಕಣ್ಣೂರ್ , ಸಾಹುಲ್ ಬಿ.ಸಿ ರೋಡ್, ಅಬ್ದುಲ್ ರಝಾಕ್ ಕರೈ , ಸುಹೈಲ್ ಚೊಕ್ಕಬೆಟ್ಟು , ತಾಹಿರ್ ಹೆಂತಾರ್ , ಇಸ್ಮಾಯಿಲ್ ಮುಂಧೀರ್ ತೋಡಾರ್ , ಮುನೀರ್ ಕಾಂಞಂಗಾಡ್, ಜಬ್ಬಾರ್ ಕಲ್ಲಡ್ಕ, ಉಸ್ಮಾನ್ ಮರೀಲ್ , ರಿಯಾಝ್ ಪಟ್ಟಾಡಿ , ಇಬ್ರಾಹಿಂ ಕುಂಡಾಜೆ , ಜಾಬಿರ್ ಬಪ್ಪಳಿಗೆ , ಮಹಮ್ಮದ್ ಶಬೀರ್ ಫರಂಗಿಪೇಟೆ, ಸಂಶುದ್ದೀನ್ ಹಮೀದ್ ಮೂಡಬಿದ್ರಿ ಮೊದಲಾದವರನ್ನು ಆರಿಸಲಾಯಿತು.
ಮಹಮ್ಮದ್ ರಫೀಕ್ ಆತೂರು ಸ್ವಾಗತಿಸಿ, ಅಶ್ರಫ್ ಪರ್ಲಡ್ಕ ವಂದಿಸಿದರು.