ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಕದ್ರಿ ಗೋಪಾಲನಾಥ್ ಗೆ ಶ್ರದ್ಧಾಂಜಲಿ
ಉಡುಪಿ, ಅ.12: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚ ರತ್ನ ಸೇವಾ ಟ್ರಸ್ಟ್ ವತಿಯಿಂದ ಅ.11ರಂದು ಅಗಲಿದ ಸ್ವರ ಸಾಮ್ರಾಟ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಗರದ ಚಿತ್ತರಂಜನ್ ಸರ್ಕಲ್ನ ಮಾರುಥಿ ವಿಥೀಕಾ ದಲ್ಲಿ ಶನಿವಾರ ನಡೆಯಿತು.
ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ನುಡಿನಮನ ಸಲ್ಲಿಸಿದರು. ಸ್ಯಾಕ್ಸೋಫೋನ್ ಕಲಾವಿದರಾದ ಡಾ.ಉಡುಪಿ ಜನಾದರ್ನ್, ಡಾ.ಅಲೆವೂರು ಸುಂದರ ಶೇರಿಗಾರ್, ಡಾ.ಸತೀಶ್ ದೇವಾಡಿಗ ಸಾಲಿಗ್ರಾಮ, ರಾಘವ ಶೇರಿಗಾರ್, ರಾಮಚಂದ್ರ ಶೇರಿಗಾರ್, ದಾಮೋದರ ಶೇರಿಗಾರ್, ಜೋಗಿ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ಜೋಗಿ ಹೆಬ್ರಿ, ಗೌರವಾಧ್ಯಕ್ಷ ಭಾಸ್ಕರ್ ಜೋಗಿ ಕಡಿಯಾಳಿ, ಕಾರ್ಯದರ್ಶಿ ಹರಿಶ್ಚಂದ್ರ ಜೋಗಿ, ಮಹಿಳಾ ಪ್ರತಿನಿಧಿ ರಜನಿ ಎಸ್.ಕುಮಾರ್, ನಾಗರಿಕ ಸಮಿತಿಯ ಪದಾಧಿಕಾರಿಗಳಾದ ತಾರಾನಾಥ್ ಮೇಸ್ತ ಶಿರೂರು, ಗಣೇಶ್ ರಾಜ್ ಸರಳಬೆಟ್ಟು, ಸುಧಾಕರ ದೇವಾಡಿಗ, ಡೇವಿಡ್, ಪಂಚರತ್ನ ಸೇವಾ ಟ್ರಸ್ಟಿನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು ಉಪಸ್ಥಿತರಿದ್ದರು.
ಪ್ರಭಾಕರ್ ಜೋಗಿ ಬಂಟಕಲ್ಲು ಕಾರ್ಯಕ್ರಮ ನಿರೂಪಿಸಿದರು.