ಉಪ್ಪಿನಂಗಡಿ: ಎ.ಯು. ನಚಿಕೇತ್ಗೆ ಬಾಲ ವಿಜ್ಞಾನಿ ಪ್ರಶಸ್ತಿ
ಉಪ್ಪಿನಂಗಡಿ: ವಿದ್ಯಾರ್ಥಿ ಜೀವನದಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿ ಸಂಶೋಧನಾ ಪ್ರವೃತ್ತಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದ ಸಾಧನೆ ತೋರಿದ, 2019ರ ಪ್ರಧಾನ ಮಂತ್ರಿ ಬಾಲ್ ಶಕ್ತಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಉಪ್ಪಿನಂಗಡಿಯ ಇಂದ್ರಪ್ರಸ್ಥ ಪಿಯು ಕಾಲೇಜಿನ ವಿದ್ಯಾರ್ಥಿ ಎ.ಯು. ನಚಿಕೇತ್ ಕುಮಾರ್ ಅವರಿಗೆ ರಾಜ್ಯ ಸರಕಾರದ ವತಿಯಿಂದ ಕೊಡಮಾಡಿದ `ಬಾಲ ವಿಜ್ಞಾನಿ ಪ್ರಶಸ್ತಿ'ಯನ್ನು ಹಸ್ತಾಂತರಿಸಲಾಯಿತು.
ಪುತ್ತೂರಿನಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣದಿಂದಾಗಿ ಭಾಗವಹಿಸಲಾಗದ ನಚಿಕೇತ್ರವರಿಗೆ ಪುತ್ತೂರು ಸಹಾಯಕ ಕಮಿಷನರ್ ನಿರ್ದೇಶನದಂತೆ ಉಪ್ಪಿನಂಗಡಿಯಲ್ಲಿನ ಅವರ ನಿವಾಸಕ್ಕೆ ಭೇಟಿ ನೀಡಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಉಪ್ಪಿನಂಗಡಿಯ ಉದ್ಯಮಿ ಸುಂದರ ಗೌಡ, ವಿಶ್ರಾಂತ ಪ್ರಾಧ್ಯಾಪಕ ದತ್ತಾತ್ರೇಯ, ಡಾ. ಶಿವರಾಮಕಾರಂತ ಬಾಲವನದ ಮೇಲ್ವಿಚಾರಕ ಅಶೋಕ ಮಣಿಯಾಣಿ, ಪುತ್ತೂರಿನ ಉದ್ಯಮಿ ಪ್ರಶಾಂತ್ ಕೆ., ವಿನೇಶ್ ಎ., ವಿಕ್ರಂ ಅತ್ತಾವರ್ ಮೊದಲಾದವರು ಉಪಸ್ಥಿತರಿದ್ದರು.