ರಾಜ್ಯಮಟ್ಟದ ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ
ಉಡುಪಿ, ಅ.16: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್ಐಓ) ಇದರ ಕರ್ನಾಟಕ ಘಟಕದ ವತಿಯಿಂದ ವಿಶ್ವ ವಿದ್ಯಾರ್ಥಿ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ.
ಈ ಸ್ಪರ್ಧೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ಕಥೆಯ ವಿಷಯದ ಕುರಿತು ಬರಹಗಾರರು ಸ್ವತಂತ್ರರಾಗಿದ್ದು ಕನಿಷ್ಠ ಎಂಟು ನೂರು ಪದಗಳನ್ನು ಹೊಂದಿರ ಬೇಕು. ಕಥೆಯು ಸ್ವಂತದಾಗಿದ್ದು, ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಇರಬಹುದು. ಕಥೆ ಕಳುಹಿಸುವಾಗ ನಿಮ್ಮ ಹೆಸರು, ವಿಳಾಸ, ಕಾಲೇಜು ಅಥವಾ ಸಂಸ್ಥೆಯ ಹೆಸರು, ವಿದ್ಯಾರ್ಥಿಯ ಐಡಿಯ ನಕಲಿ ಪ್ರತಿ ಮತು್ತ ಮೊಬೈಲ್ ಸಂಖ್ಯೆ ಒದಗಿಸಬೇಕು.
ಸ್ಪರ್ಧೆಗೆ ಕಳುಹಿಸಿಕೊಟ್ಟ ಕಥೆಯ ಸಂಪೂರ್ಣ ಹಕ್ಕು ಆಯೋಜಕರದ್ದಾ ಗಿರುತ್ತದೆ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಕಥೆಗೆ ಪ್ರಥಮ ಬಹುಮಾನ 10,000ರೂ. ನಗದು ಮತ್ತು ಪ್ರಮಾಣ ಪತ್ರ, ದ್ವೀತಿಯ 7000 ರೂ. ನಗದು ಮತ್ತು ಪ್ರಮಾಣ ಪತ್ರ ಹಾಗೂ ತೃತೀಯ 5000ರೂ. ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಕಥೆ ಕಳುಹಿಸಲು ಕೊನೆಯ ದಿನಾಂಕ ನವೆಂಬರ್ 30. ಕಥೆಯನ್ನು ಇಮೇಲ್-storydept2019gmail. com ಅಥವಾ ಪೋಸ್ಟ್ ಕಲ್ಚರಲ್ ಡಿಪಾರ್ಟ್ಮೆಂಟ್ ಎಸ್.ಐ.ಓ ಕರ್ನಾಟಕ - 7 ಎಸ್.ಆರ್.ಕೆ ಗಾರ್ಡನ್, ಜಯನಗರ ಈಸ್ಟ್, ಬೆಂಗಳೂರು - 560041 ಈ ವಿಳಾಸಕ್ಕೂ ಕಳುಹಿಸಿಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್- 8050101458, 9663810718ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.