ಅ.27: ಕೆಸಿ ರೋಡ್ನಲ್ಲಿ ಹುಬ್ಬುರ್ರಸೂಲ್ ಕಾರ್ಯಕ್ರಮ
ಕೋಟೆಕಾರ್, ಅ.20: ಸುನ್ನೀ ಕೋ ಆರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ (ಎಸ್ಎಂಎ, ಎಸ್ಜೆಯು, ಎಸ್ವೈಎಸ್, ಎಸ್ಸೆಸ್ಸೆಫ್)ಇದರ ಜಂಟಿ ಆಶ್ರಯದಲ್ಲಿ ಅ.27ರಂದು ಸಂಜೆ 4 ಗಂಟೆಗೆ ಕೆಸಿ ರೋಡ್ ಜಂಕ್ಷನ್ನಲ್ಲಿ ಹುಬ್ಬುರ್ರಸೂಲ್ ಕಾರ್ಯಕ್ರಮ ಜರುಗಲಿದೆ.
ಕೂಟುಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಮುಖ್ಯ ಬಾಷಣ ಮಾಡಲಿದ್ದು, ಕಾರ್ಯಕ್ರಮದಲ್ಲಿ ಅಸೈಯ್ಯದ್ ಕುಂಬೋಳ್ ತಂಙಳ್, ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಅಲ್ಹಾಜ್ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story