ಗಾಂಜಾ ಸೇವನೆ: ಒಂಭತ್ತು ಮಂದಿ ವಶಕ್ಕೆ
ಉಡುಪಿ, ಅ.21: ಗಾಂಜಾ ಸೇವನೆಗೆ ಸಂಬಂಧಿಸಿ ಉಡುಪಿ ಸೆನ್ ಪೊಲೀಸರು ಅ.19ರಂದು ಹೆರ್ಗಾ ಗ್ರಾಮದ ಈಶ್ವರ ನಗರದ ಐಡಿಯಲ್ ರೆಸಿಡೆನ್ಸಿ ಬಳಿ ಒಂಭತ್ತು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಗಾಂಜಾ ಸೇವನೆ ಮಾಡುತ್ತಿದ್ದ ಮಂಗಳೂರು ಬಲ್ಮಠದ ರಯಾನ್ ಹ್ಯಾರೀಸ್ (20), ಮಂಗಳೂರು ಮಣ್ಣಗುಡ್ಡದ ಸಂಕೇತ್ ಪೈ(20), ಮಂಗಳೂರು ಕದ್ರಿ ಕಂಬಳ ರಸ್ತೆಯ ಪ್ರಣವ್ ವೈ.ಶೇರಿಗಾರ್(20), ಕೇರಳ ರಾಜ್ಯದ ಆಲ್ವಿನ್ ಎಕ್ಸ್ಲಿ(19), ಅಮೀನ್ ಅಬ್ದುಲ್ ಜಲೀಲ್(20), ಅಭಿಷೇಕ್ ಅನಿಲ್ ಕುಮಾರ್ ಪಿಳೈ(19), ಅಶ್ವಿನ್ ಎ.ಆರ್.(21), ಮುಹಮ್ಮದ್ ಇಶಾನ್ ಎಂ. (20), ಆಶೀಶ್ ಎಕ್ಸ್ಲಿ(21) ಎಂಬವರನ್ನು ವಶಕ್ಕೆ ಪಡೆದು, ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದ ತಜ್ಞರ ಮುಂದೆ ಹಾಜರು ಪಡಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅ.21ರಂದು ಬಂದ ವರದಿಯಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story