ಮಹಿಳಾ ಸ್ವಸಹಾಯ ಗುಂಪುಗಳಿಗೆ 1.5 ಕೋ.ರೂ. ಶೂನ್ಯ ಬಡ್ಡಿ ಸಾಲ ವಿತರಣೆ
ಮಲ್ಪೆ, ಅ.21: ಮಹಿಳಾ ಸ್ವ ಸಹಾಯ ಸಂಘಗಳಿಗೆ ಮಹಾಲಕ್ಷ್ಮಿ ಬ್ಯಾಂಕ್ ಮೂಲಕ ಮಂಜೂರುಗೊಂಡ ಶೂನ್ಯ ಬಡ್ಡಿದರದಲ್ಲಿ ಸಾಲ ಯೋಜನೆಯ ಚೆಕ್ ವಿತರಣಾ ಕಾರ್ಯಕ್ರಮ ಸೋಮವಾರ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆಯಿತು.
ಮಲ್ಪೆ ಶಾಖೆಯಿಂದ 194 ಮಹಿಳಾ ಸದಸ್ಯರ ಸುಮಾರು 31 ಸ್ವಸಹಾಯ ಗುಂಪುಗಳಿಗೆ 1.5 ಕೋಟಿ ರೂ. ಸಾಲದ ಚೆಕ್ನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ವಿತರಿಸಿದರು. ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ ವಹಿಸಿದ್ದರು.
ನಗರಸಭಾ ಸದಸ್ಯರಾದ ಲಕ್ಷ್ಮೆ ಮಂಜುನಾಥ್, ವಿಜಯ ಕೊಡವೂರು, ಸುಂದರ ಜೆ.ಕಲ್ಮಾಡಿ, ತಾಪಂ ಸದಸ್ಯ ಶರತ್ ಬೈಲಕರೆ, ಮಹಿಳಾ ಮೀನುಗಾರರ ಸಂಘದ ಜಲಜ ಕೋಟ್ಯಾನ್, ಬ್ಯಾಂಕಿನ ಉಪಾಧ್ಯಕ್ಷ ಮಾದವ ಸುವರ್ಣ, ನಿರ್ದೇಶಕರಾದ ವಿನಯ ಕರ್ಕೇರ, ಎನ್.ಟಿ.ಅಮೀನ್, ವಾಸುದೇವ ಸಾಲ್ಯಾನ್, ರಾಮದಾಸ್ ಶ್ರೆಯಾನ್, ಸುರೇಶ್ ಬಿ.ಕರ್ಕೇರ, ವನಜ ಹೆಚ್. ಕಿದಿಯೂರು, ವನಜ ಜೆ.ಪುತ್ರನ್, ಶಿವರಾಮ ಕುಂದರ್ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕಿನ ಶಾಖಾ ಪ್ರಬಂಧಕ ಕೆ.ಸುಬ್ಬಣ್ಣ ಸ್ವಾಗತಿಸಿದರು. ಸಿಬಂದಿ ಹರಿನಾಥ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.