ಮಲಬಾರ್ ಗೋಲ್ಡ್ನಲ್ಲಿ ದೀಪಾವಳಿ ವಿಶೇಷ ಆಭರಣ ಅನಾವರಣ
ಉಡುಪಿ, ಅ.21: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ದೀಪಾವಳಿ ಹಬ್ಬದ ಸಂಭ್ರಮದ ಪ್ರಯುಕ್ತ ರೂಪಿಸಲಾದ ಹೊಸ ವಿನ್ಯಾಸದ ದೀಪಾವಳಿ ವಿಶೇಷ ಆಭರಣಗಳನ್ನು ರವಿವಾರ ಉಡುಪಿಯ ಮಳಿಗೆಯಲ್ಲಿ ಬಿಡುಗಡೆಗೊಳಿಸಲಾಯಿತು.
ನಾಲ್ಕು ಹೊಸ ವಿನ್ಯಾಸದ ವಜ್ರಾಭರಣಗಳನ್ನು ಕ್ರಮವಾಗಿ ಮಣಿಪಾಲದ ಪವರ್ ಸಂಸ್ಥೆಯ ಸ್ಥಾಪಕಿ ಸರಿತಾ ಸಂತೋಷ್, ಮಣಿಪಾಲ ಕೆಎಂಸಿಯ ಡಾ.ಅರ್ಚನಾ ಭಕ್ತಾ, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿ ಪ್ರಜ್ಞಾ ಕೊಡವೂರು, ಮಿಸ್ ಕರ್ನಾಟಕ ಸ್ಪರ್ಧೆಯ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪುರಸ್ಕೃತ ವಾಡೆಲ್ ಸೃಷ್ಟಿ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ತುಳು ಚಿತ್ರರಂಗದ ಉದಯೋನ್ಮುಖ ನಟ, 'ಗಿರಿಗಿಟ್' ತುಳು ಸಿನೆಮಾದ ನಾಯಕ ನಟ ರೂಪೇಶ್ ಶೆಟ್ಟಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯೆಯಾಗಿ ಆಯ್ಕೆಯಾದ ತಾರಾ ಉಮೇಶ್ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ಸ್ವಾಗತಿಸಿದರು. ತಾರಾ ಆಚಾರ್ಯ ಸ್ವಾಗತಿಸಿದರು. ರಾಘವೇಂದ್ರ ನಾಯಕ್ ವಂದಿಸಿದರು. ಈ ಸಮಯದಲ್ಲಿ ಪ್ರತಿ 15,000ರೂ. ಮೌಲ್ಯದ ಚಿನ್ನಾಭರಣ ಖರೀದಿಗೆ 1 ಚಿನ್ನದ ನಾಣ್ಯ ಹಾಗೂ ಪ್ರತಿ 15,000 ವಜ್ರಾಭರಣ ಖರೀದಿಗೆ 2 ಚಿನ್ನದ ನಾಣ್ಯ ಉಚಿತ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.