ಬ್ಯಾಂಕ್ ಮುಷ್ಕರ: ಗ್ರಾಹಕರಿಗೆ ತಟ್ಟಿದ ಬಿಸಿ
ಸಾಂದರ್ಭಿಕ ಚಿತ್ರ
ಮಂಗಳೂರು, ಅ.22: ಬ್ಯಾಂಕ್ಗಳ ವಿಲೀನ ಖಂಡಿಸಿ ಮತ್ತು ಇತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ನೀಡಿದ ರಾಷ್ಟ್ರವ್ಯಾಪಿ ಕರೆಯಂತೆ ಮಂಗಳವಾರ ದ.ಕ. ಜಿಲ್ಲೆಯಲ್ಲೂ ಬ್ಯಾಂಕ್ ಮುಷ್ಕರ ನಡೆಯುತ್ತಿದೆ. ವಿವಿಧ ಬ್ಯಾಂಕ್ಗಳ ಕೇಂದ್ರ ಮತ್ತು ಶಾಖಾ ಕಚೇರಿಗಳಲ್ಲಿ ನೌಕರರು ಗೈರು ಹಾಜರಾದ ಕಾರಣ ಮುಷ್ಕರದ ಬಿಸಿ ಗ್ರಾಹಕರ ಮೇಲಾಗಿದೆ.
ಎಲ್ಲಾ ಬ್ಯಾಂಕ್ಗಳು ತೆರೆಯಲ್ಪಟ್ಟಿದ್ದರೂ ನೌಕರರ ಕೊರತೆಯಿಂದ ಅಧಿಕಾರಿಗಳೇ ಗ್ರಾಹಕರ ಸೇವೆ ಸಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬ್ಯಾಂಕ್ಗಳ ಮುಂದೆ ನೌಕರರು ತಾವಿಟ್ಟ ಬೇಡಿಕೆಯ ಪಟ್ಟಿಯ ಭಿತ್ತಿಪತ್ರ ಅಳವಡಿಸಿ ಮುಷ್ಕರ ನಡೆಸುತ್ತಿರುವ ಬಗ್ಗೆ ಗ್ರಾಹಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಹೆಚ್ಚಿನ ಗ್ರಾಹಕರಿಗೆ ಅದರ ಅರಿವು ಇಲ್ಲದ ಕಾರಣ ಬ್ಯಾಂಕ್ಗಳಿಗೆ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ.
Next Story