ಸಂತೋಷ್ನಗರ ಮಸೀದಿಯ ಪದಾಧಿಕಾರಿಗಳ ಆಯ್ಕೆ
ಹಬೀಬ್ ಅಲಿ
ಉಡುಪಿ, ನ.11: ಕಂರಬಳ್ಳಿ ಸಂತೋಷ್ ನಗರದ ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆಯು ನ.10ರಂದು ನಡೆದಿದ್ದು, ಇದರಲ್ಲಿ 2019-20ರ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಬೀಬ್ ಅಲಿ, ಉಪಾಧ್ಯಕ್ಷರಾಗಿ ಎಂ.ಮೊಹಮ್ಮದ್ ಇಕ್ಬಾಲ್, ಕಾರ್ಯದರ್ಶಿಯಾಗಿ ಎಸ್.ಎ.ಫೈಝಾಲ್, ಜೊತೆ ಕಾರ್ಯದರ್ಶಿಯಾಗಿ ಅಬುಬಕ್ಕರ್ ಸಿದ್ದಿಕ್, ಕೋಶಾಧಿಕಾರಿಯಾಗಿ ಆರೀಫ್ ರೆಹಮಾನ್, ಮಣಿ ಪಾಲ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಕರೀಂ ಎಚ್., ಮೊಹಮ್ಮದ್ ಹನೀಫ್ ಕರಂಬಳ್ಳಿ, ಮೊಹಮ್ಮದ್ ಅಶ್ರಫ್, ಎಂ.ಎಸ್. ಮೊಯ್ದೀನ್, ನಾಸೀರ್, ಅಬ್ದುಲ್ ರೆಹಮಾನ್, ಸುಲ್ತಾನುಲ್ ಆರೀಫ್, ಇಬ್ರಾಹಿಂ, ಎಸ್.ಎಂ.ಉಮರಬ್ಬ, ಎಸ್.ಎಂ.ಮುಸ್ತಾಫ, ಅಮೀರ್ ಸುಹೈಲ್, ರಿಯಾಝ್ ಕರಂಬಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
Next Story