ಪಿಲಿಕುಳ ಅಭಿವೃದ್ಧಿಗೆ ಅಬುಧಾಬಿ ಉದ್ಯಮಿಯಿಂದ 15 ಲಕ್ಷ ರೂ. ದೇಣಿಗೆ
ಮಂಗಳೂರು, ನ.16: ಅಬುಧಾಬಿಯ ಉದ್ಯಮಿ ರಾಮ್ದಾಸ್ ಕಾಮತ್ ಮತ್ತು ಅವರ ಪತ್ನಿ ಜಯಶ್ರಿ ಕಾಮತ್ಪಿಲಿಕುಳ ಜೈವಿಕ ಉದ್ಯಾನವನದ ಅಭಿವೃದ್ಧಿ ಕಾರ್ಯಕ್ಕೆ 15 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಪಿಲಿಕುಳದಲ್ಲಿ ಇತ್ತೀಚೆಗೆ ಜನಿಸಿದ ಐದು ಹುಲಿ ಮರಿಗಳ ವಾಸ್ತವ್ಯದ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಈ ಹಣವನ್ನು ವಿನಿ ಯೋಗಿಸಲಾಗುವುದು. ಹುಲಿ ಮರಿಗಳಿಗೆ ಅವರು ಸೂಚಿಸಿದಂತೆ ನಾಮಕರಣ ಮಾಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದರು.
Next Story