ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ : ಶಿಕ್ಷಕಿಗೆ ಗಾಯ
ಪುತ್ತೂರು : ಸ್ಕೂಟರ್ ಮತ್ತು ಕಾರೊಂದರ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟರ್ ಸವಾರೆ ಪುತ್ತೂರು ತಾಲೂಕಿನ ಇರ್ದೆ-ಉಪ್ಪಳಿಗೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸಂಧ್ಯಾ ಬೈಲಾಡಿ ಎಂಬವರು ಗಾಯಗೊಂಡ ಘಟನೆ ಇರ್ದೆ ಗ್ರಾಮದ ಬೈಲಾಡಿ ಎಂಬಲ್ಲಿ ಶನಿವಾರ ನಡೆದಿದೆ.
ಬೈಲಾಡಿ ನಿವಾಸಿ, ಪುತ್ತೂರಿನ ನೋಟರಿ ವಕೀಲ ಚಿದಾನಂದ ಬೈಪಾಡಿ ಅವರ ಪತ್ನಿ ಸಂಧ್ಯಾ ಬೈಲಾಡಿ ಅವರು ಶನಿವಾರ ಶಾಲೆಯಿಂದ ಮನೆಗೆ ತನ್ನ ಆಕ್ಟಿವಾ ಹೋಂಡಾ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಅಫಘಾತ ಸಂಭವಿಸಿದೆ.
ಗಾಯಗೊಂಡಿರುವ ಸಂಧ್ಯಾ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
Next Story